Advertisement

ಕಲ್ಲು ಗಣಿಯಲ್ಲಿ ಬ್ಲಾಸ್ಟ್ ನಿಂದ ಕಲ್ಲು ಬಡಿದು ಕಾರ್ಮಿಕ ಸಾವು- ಇಬ್ಬರಿಗೆ ಗಾಯ

07:42 PM Jul 08, 2021 | Suhan S |

ವಿಜಯಪುರ: ನಗರದ ಹೊರ ವಲಯದಲ್ಲಿರುವ ಕಲ್ಲು ಗಣಿಯೊಂದರಲ್ಲಿ ಕಲ್ಲು ಸ್ಪೋಟಿಸುವ ಸಂದರ್ಭದಲ್ಲಿ ಸಿಡಿದು ಬಂದ ಕಲ್ಲು ಬಡಿದು ಓರ್ವ ಕಾರ್ಮಿಕ ‌ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.

Advertisement

ಗುರುವಾರ ಸಂಜೆ ಅಲಿಯಾಬಾದ ಪರಿಸರದಲ್ಲಿರುವ ಸಾವಳಗಿ ಸ್ಟೋನ್ ಕ್ರಷರ್ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಮೃತ ಕಾರ್ಮಿಕನನ್ನು ಅಲಿಯಾಬಾದ ನಿವಾಸಿ ಮೋಹನ್ ನಾಯಿಕ್ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡಿರುವ ಸಚಿನ್ ಮಲ್ಲಪ್ಪ ಕವಟಗಿ, ಶ್ರವಣಕುಮಾರ ಬಸಪ್ಪ ಕವಟಗಿ ಇವರನ್ನು ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ ಎಂದು ಎಸ್ಪಿ ಅನುಪಮ್ ಅಗರವಾಲ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next