Advertisement

Siddapura: ವಾಟೆ ಹುಳಿ ಸಂಗ್ರಹ ವಿಚಾರದಲ್ಲಿ ಹಲ್ಲೆ

07:36 PM Mar 21, 2024 | Team Udayavani |

ಸಿದ್ದಾಪುರ: ವಾಟೆ ಹುಳಿ ಸಂಗ್ರಹಿಸುವ ವಿಚಾರದಲ್ಲಿ ವ್ಯಕ್ತಿಗಳಿಬ್ಬರ ನಡುವೆ ಘರ್ಷಣೆ ಸಂಭವಿಸಿದ್ದು, ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಜಾತಿ ನಿಂದನೆ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ.

Advertisement

ಮಚ್ಚಟ್ಟು ಗ್ರಾಮದ ತೊಂಬಟ್ಟು ಕಬ್ಬಿನಾಲೆ ರಾಮ ನಾಯ್ಕ ಮತ್ತು ನಾರಾಯಣ ಶೆಟ್ಟಿಗಾರ್‌ ತೊಂಬಟ್ಟು ಪರಿಸರದ ಕಾಡಿನ ಪ್ರದೇಶದಲ್ಲಿ ಹುಳಿ ಸಂಗ್ರಹಿಸುತ್ತಿದ್ದು, ಆ ವಿಚಾರದಲ್ಲಿ ಆಗಾಗ ಘರ್ಷಣೆ ನಡೆಯುತ್ತಿತ್ತು. ಅದು ಪೊಲೀಸ್‌ ಠಾಣೆಯ ಮೆಟ್ಟಲೇರಿ ಅಲ್ಲಿ ಇತ್ಯರ್ಥ ಕೂಡ ಆಗಿತ್ತು. ಮಾ. 20ರಂದು ರಾಮ ನಾಯ್ಕ ತೋಟಕ್ಕೆ ನೀರು ಬಿಡಲು ಹೋದಾಗ ನಾರಾಯಣ ಶೆಟ್ಟಿಗಾರ್‌ ಜಾತಿ ನಿಂದನೆ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next