Advertisement

ಅಕ್ರಮ ಜಾನುವಾರು ಸಾಗಾಟ; ಪೊಲೀಸ್ ವಶ

06:00 PM Oct 30, 2021 | Suhan S |

ಸಾಗರ: ತಾಲೂಕಿನ ಭೀಮನಕೋಣೆ ಸಮೀಪದ ಹರುಡಿಕೆ ನಾಲ್ಕು ರಸ್ತೆಯ ಬಳಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಎರಡು ಜಾನುವಾರು ಸಾಗಿಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಹಿಡಿದು ಭಜರಂಗದಳ ಕಾರ್ಯಕರ್ತರ ಮೂಲಕ ಗ್ರಾಮಾಂತರ ಠಾಣೆಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಗೂಡ್ಸ್ ವಾಹನದಲ್ಲಿ ಎರಡು ಹೋರಿಯನ್ನು ಸಾಗಿಸಲಾಗುತ್ತಿತ್ತು. ಸ್ಥಳೀಯರು ಅನುಮಾನಗೊಂಡು ವಾಹನ ತಡೆದಿದ್ದಾರೆ. ತಕ್ಷಣ ವಿಷಯವನ್ನು ಭಜರಂಗ ದಳ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಭಜರಂಗ ದಳ ಕಾರ್ಯಕರ್ತರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ನಂತರ ಗೋವುಗಳನ್ನು ಗ್ರಾಮಾಂತರ ಠಾಣೆಗೆ ತರಲಾಯಿತು. ವಾಹನ ಚಾಲಕ ಹಾಗೂ ಮತ್ತೊಬ್ಬರನ್ನು ವಿಚಾರಣೆಗೊಳಪಡಿಸಲಾಗಿದೆ. ಪಿಕಪ್‌ನ ಮಾಲಿಕ, ಚಾಲಕ ಕಾಗೋಡು ಸತೀಶ, ಕೇಶವ ಅತ್ತಿಸರ ಅವರ ವಿರುದ್ಧ ದೂರು ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next