Advertisement

ಗೃಹ ಪ್ರವೇಶಗೊಳ್ಳಲಿದ್ದ ಮನೆಯಲ್ಲಿ ವಿದ್ಯುತ್‌ ಶಾಕ್‌: ಯಜಮಾನ ಸಾವು

01:57 AM Jan 15, 2021 | Team Udayavani |

ಪುತ್ತೂರು: ಸಂಪ್ಯದಲ್ಲಿ ಗೃಹ ಪ್ರವೇಶಕ್ಕೆ ಅಣಿಯಾಗಿದ್ದ ಮನೆಯಲ್ಲಿ ವಿದ್ಯುತ್‌ ಸಂಪರ್ಕದ ಕೆಲಸ ನಿರತ ವೇಳೆ ಮನೆ ಮಾಲಕನಿಗೆ ವಿದ್ಯುತ್‌ ತಗುಲಿ ಮೃತಪಟ್ಟ  ಘಟನೆ ಜ. 14ರಂದು ಸಂಭವಿಸಿದೆ.

Advertisement

ಸಂಪ್ಯದ ಉದಯಗಿರಿ ನಿವಾಸಿ, ಪರ್ಲಡ್ಕ ಬೈಪಾಸು ಬಳಿ ವಾಹನ ಮೆಕ್ಯಾನಿಕ್‌ ಆಗಿದ್ದ ಕೃಷ್ಣಪ್ಪ ನಾಯ್ಕ್ (45) ಮೃತಪಟ್ಟ ದುರ್ದೈವಿ.

ಗೃಹ ಪ್ರವೇಶಕ್ಕೆ ಸಿದ್ಧತೆ :

ಸಂಪ್ಯದ ಉದಯಗಿರಿಯಲ್ಲಿ ಕೃಷ್ಣಪ್ಪ ನಾಯ್ಕ ಅವರು ಹೊಸ ಮನೆ ಕಟ್ಟಿಸಿದ್ದು ಅದರ ಗೃಹಪ್ರವೇಶ ಜ. 16ರಂದು ನಿಗದಿಯಾಗಿತ್ತು. ಜ. 13ರಂದು ರಾತ್ರಿ ಗೃಹಪ್ರವೇಶದ ಕುಟ್ಟಿ ಪೂಜೆ ನೆರವೇರಿತ್ತು. ಜ. 14 ರಂದು ಸಂಜೆ ಹೊಸ ಮನೆಯಲ್ಲಿ ಕೃಷ್ಣಪ್ಪ ನಾಯ್ಕ್ ಅವರು ಪ್ಲಗ್‌ ಅಳವಡಿಸುವ ಕಾರ್ಯದಲ್ಲಿ ನಿರತರಾಗಿದ್ದಾಗ ಅವರಿಗೆ ವಿದ್ಯುತ್‌ ಶಾಕ್‌ ತಗುಲಿದೆ.

ತತ್‌ಕ್ಷಣ ಆಸ್ಪತ್ರೆಗೆ ಕೊಂಡು ಹೋಗಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು. ಸಹೋದರ ಚೋಮ ನಾಯ್ಕ್ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next