Advertisement

ಮುದ್ದೇಬಿಹಾಳ: ಬಾವಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಆರೋಪ

07:14 PM Nov 30, 2022 | Team Udayavani |

ಮುದ್ದೇಬಿಹಾಳ: ತೋಟದ ಬಾವಿಯೊಂದರಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿರುವ ಘಟನೆ ತಾಲೂಕಿನ ನಾಲತವಾಡ ಹೋಬಳಿ ವ್ಯಾಪ್ತಿಯ ಕೊನೇ ಹಳ್ಳಿ ನಾಗಬೇನಾಳ ತಾಂಡಾ ಬಳಿ ಮಂಗಳವಾರ (ನ.29 ರಂದು) ನಡೆದಿದೆ.

Advertisement

ವಿಜಯಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದ ಸುಷ್ಮಿತಾ ಜೇವಲಪ್ಪ ಪವಾರ (18) ಮೃತ ಯುವತಿ.

ಸುಷ್ಮಿತಾಳಿಗೆ ಗ್ರಾಮದ ಸುನೀಲ ಎಂಬ ಯುವಕ ಮೆಸೇಜ್‌, ಕಾಲ್‌ ಮಾಡಿ ಆಗಾಗ ಕಿರುಕುಳ ನೀಡುತ್ತಿದ್ದ. ಈತನೇ ತನ್ನ ಮಗಳ ಸಾವಿಗೆ ಕಾರಣ, ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತ ಯುವತಿಯ ತಂದೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಿಎಸ್‌ ಐ ಆರೀಫ ಮುಷಾಪುರಿ ಅವರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದು ಆರೋಪಿ ಪತ್ತೇಗಾಗಿ ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next