Advertisement
ಘಟನೆ ವಿವರ: ರೈತರು ಆ ಭೂಮಿಯಲ್ಲಿ ಸಾಗುವಳಿ ಮಾಡಲು ಮುಂದಾಗ ವಿಷಯ ತಿಳಿದ ದುಂಡಸಿ ಅರಣ್ಯ ಇಲಾಖೆಯ ಆರ್.ಎಪ್.ಒ ಹಾಗೂ ತಡಸ ಠಾಣೆಯ ಪಿ.ಎಸ್.ಐ ಸ್ಥಳಕ್ಕೆ ಹೋಗಿ ರೈತರಿಗೆ ಇದು ಅರಣ್ಯ ಇಲಾಖೆಯ ಸ್ಥಳವಾಗಿರುವುದರಿಂದ ಯಾರು ಅತಿಕ್ರಮಣ ಮಾಡಲು ಅವಕಾಶವಿಲ್ಲ. ಈ ಸ್ಥಳವನ್ನು ಅರಣ್ಯ ಇಲಾಖೆಯ ಕಾಯ್ದಿಟ್ಟ ಸ್ಥಳವೆಂದು ಕಾಯ್ದಿರಿಸಲಾಗಿದೆ ಎಂದು ಹೇಳಿದ್ದರಂತೆ. ಸ್ಥಳದಲ್ಲಿದ್ದ ರೈತ ಮಹಿಳೆ ಹಾಗೂ ರೈತರು ವಿಡೀಯೊ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ. ಆರ್.ಎಪ್.ಒ
Related Articles
Advertisement
ರೈತರು ಈ ಜಮೀನುಗಳನ್ನು ಸಕ್ರಮ ಮಾಡಿಕೊಡಲು ಫಾರಂ ನಂಬರ್ ೫೩ ರಲ್ಲಿ ಅರ್ಜಿಯನ್ನು ಸಹ ಕೊಟ್ಟಿದ್ದಾರೆ. ಹಿಂದಿನ ಶಾಸಕರು ಪ್ರತಿಯೊಬ್ಬ ರೈತರಿಗೂ 2 ಎಕರೆ ಜಮೀನು ಕೊಡುತ್ತೇವೆಂದು ಹೇಳಿದ್ದರು ಆದರೆ ನೀತಿಸಂಹಿತೆ ಜಾರಿಯಾಗಿದ್ದರಿಂದ ಅದು ಇಲ್ಲಿವರೆಗೂ ನೆನೆಗುದಿಗೆ ಬಿದ್ದಿದೆ ಮತ್ತು ಈಗ ರೈತರು ಉಚ್ಚ ನ್ಯಾಯಾಲಯ ಧಾರವಾಡದ ಆದೇಶದ ಪ್ರತಿಯನ್ನು ಅಕ್ರಮ ಸಕ್ರಮ ಸಮಿತಿಗೆ ಸಲ್ಲಿಸಿದ್ದರೂ ರೈತರ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಮತ್ತು ತಹಸೀಲ್ದಾರರು ರೈತರ ಮೇಲೆ ಇಷ್ಟು ದೌರ್ಜನ್ಯವಾಗುತಿದ್ದರೂ ಇಲ್ಲಿವರೆಗೂ ಯಾವುದೇ ಉತ್ತರ ಕೊಡುತ್ತಿಲ್ಲ ಎಂದು ರಾಮಣ್ಣ ಮತ್ತಿಗಟ್ಟಿ, ಶಂಕರ ಲಮಾಣಿ, ಕಾಸಿಂಸಾಬ ಮುಲ್ಲಾನವರ, ಗೋಪಾಲ ಲಮಾಣಿ, ಮತ್ತು ಸುಜಾತ ಹೂಗಾರ ದೂರಿದರು.
ದುಂಡಸಿ ಆರ್.ಎಪ್.ಒ ರಮೇಶ ಶೇಟಸನ್ನದಿ ಮಾತನಾಡಿ, ಕುನ್ನೂರ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 150ಕ ಮತ್ತು 150 ಡ ಈ ಸರ್ವೇ ನಂಬರ್ ನಮ್ಮ ಅರಣ್ಯ ನಡೆತೋಪು ಅಂತಾ ಇದೆ. ರವಿವಾರ ಅರಣ್ಯಕ್ಕೆ ಪ್ರವೇಶಿಸಿ ಸಾಗುವಳಿಗಾಗಿ ಬಂದ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ರೈತರೊಂದಿಗೆ ಚರ್ಚಿಸುತ್ತಿದ್ದಂತೆ ಅಲ್ಲಿದ್ದ ಮಹಿಳೆ ಕೈ ಯಲ್ಲಿ ಬಾಟಲು ಹಿಡದಿದ್ದಳು ಪಿ.ಎಸೈ ಅವರು ಮಾತನಾಡುತ್ತಿದ್ದಾಗ ಮಹಿಳೆ ಅದನ್ನು ಸೇವಿಸಲು ಮುಂದಾದಳು ಅದನ್ನು ತಡೆಯಲು ಮುಂದಾದೆವು. ಅಷ್ಟರಲ್ಲಿ ಅದನ್ನು ಆ ಮಹಿಳೆ ಕುಡದಿದ್ದಳು. ಆದರೆ ಅದು ವಿಷದ ಬಾಟಲು ಅಲ್ಲ. ವಾಸನೆಯೂ ಇರಲಿಲ್ಲ. ಸಂಜೆ ತರ್ಲಘಟ್ಟ ಗ್ರಾಮಕ್ಕೆ ನಾವು, ತಹಸೀಲ್ದಾರ, ಮತ್ತು ಪೊಲೀಸರು ತೆರಳಿ ಗ್ರಾಮದ ಜನರಿಗೆ ಕಾನೂನಿನ ಬಗ್ಗೆ ತಿಳಿಸಿದ್ದೇವೆ ಎಂದರು.