Advertisement

ಮಂಗಳೂರು : ಜೈಲಿನ ಖೈದಿಗಳ ನಡುವೆ ಮಾರಾಮಾರಿ, ಇಬ್ಬರಿಗೆ ಗಾಯ

01:15 PM Apr 25, 2021 | Team Udayavani |

ಮಂಗಳೂರು : ಖೈದಿಯೊಬ್ಬ ತನ್ನ ಸಹ ಖೈದಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಗಳೂರು ಸಬ್ ಜೈಲಿನಲ್ಲಿ ನಡೆದಿದೆ.

Advertisement

ಪಣಂಬೂರು ದರೋಡೆ ಪ್ರಕರಣದಲ್ಲಿ ಕಳೆದ ಜುಲೈನಿಂದ ಜೈಲಿನಲ್ಲಿರುವ ಸಮೀರು ಎಂಬಾತ ಹಲ್ಲೆ ಮಾಡಿರುವ ಖೈದಿ. ಮುಲ್ಕಿ ಪೊಲೀಸರಿಂದ ಬಂಧಿತರಾಗಿರುವ ಅನ್ಸಾರ್ ಹಾಗೂ ಮೂಡುಬಿದಿರೆ ದರೋಡೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ ಝೈನುದ್ದೀನ್ ಮೇಲೆ ಸಮೀರ್ ಹಲ್ಲೆ ನಡೆಸಿದ್ದಾನೆ.

ಇಬ್ಬರ ಮೇಲೆ ಸಮೀರ್ ಚಮಚ ಹಾಗೂ ಮತ್ತಿತ್ತರ ಪರಿಕರಗಳಿಂದ ಹಲ್ಲೆ ನಡೆಸಿದ್ದು, ಅನ್ಸಾರ್ ನ ತೋಳು ಮತ್ತು ಕಾಲಿಗೆ ಗಾಯವಾಗಿದೆ. ಝೈನುದ್ದೀನ್ ನ ಭುಜ ಮತ್ತು ಬೆನ್ನಿಗೆ ಗಾಯವಾಗಿದೆ.

ಘಟನೆ ಸಂಬಂಧ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next