Advertisement

ಕೊಳ್ಳೇಗಾಲದಲ್ಲಿ ಸರಣಿ ಮನೆಗಳವು: ಆತಂಕದಲ್ಲಿ ಜನತೆ

09:04 AM Mar 18, 2021 | Team Udayavani |

ಕೊಳ್ಳೇಗಾಲ: ಪಟ್ಟ ಣದ ವಿವಿಧ ಬಡಾವಣೆಗಳಲ್ಲಿ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಗಳಲ್ಲಿದ್ದ ನಗದು ಮತ್ತು ಚಿನ್ನ ಅಪಹರಿಸಿ ಪರಾರಿಯಾಗಿರುವ ಘಟನೆ ಬುಧವಾರ ನಡೆದಿದೆ.

Advertisement

ಪಟ್ಟಣದ ಬಸವೇಶ್ವರ ನಗರದ ವೀರ ಣ್ಣ ಗೌಡ ಅವರ ಮನೆ ಬೀಗ ಮುರಿದು 40 ಸಾವಿರ ನಗದು ಅಪಹರಿಸಿದ್ದಾರೆ. ಆಶ್ರಯ ಬಡಾವಣೆಯ ನಿವೃತ್ತ ಎಎಸೈ ಶಂಕರ ಮೂರ್ತಿ ಅವರ ಮನೆ ಬೀಗ ಮುರಿದ ಕಳ್ಳರು, 60 ಸಾವಿರ ನಗದು ಚಿನ್ನದ ಒಡವೆ ಅಪ ಹರಿಸಿದ್ದಾರೆ. ಮನೆಯ ಹಿರಿಯರು ತಮಿಳುನಾಡಿನ ಚೆನ್ನೈಗೆ ಹೋಗಿದ್ದು ಅವರು ಬಂದ ಬಳಿಕ ಮಾಹಿತಿ ದೊರೆಯಲಿದೆ ಎಂದು ಪೊಲಸರು ತಿಳಿಸಿದ್ದಾರೆ.

ನಗರದ ರಾಜೀ ವ್‌ ನಗರ ಕೃಷ್ಣ ಕುಮಾರ್‌ ರವರ ಮನೆಯ ಬೀಗ ಮುರಿದು 30 ಸಾವಿರ ನಗದು, ಪಟ್ಟ ಣದ ಮೂರು ಮನೆ ಗ ಳಲ್ಲಿ ಬೀಗ ಮುರಿದು ಕಳು ವಾ ಗಿ ರುವ ಘಟನೆ ಬಡಾವಣೆಯ ನಿವಾಸಿಗಳಿಗೆ ನಡುಕ ಉಂಟು ಮಾಡಿದೆ. ಸ್ಥಳಕ್ಕೆ ಸರ್ಕಲ್‌ ಇನ್ಸ್‌ ಪೆ ಕ್ಟರ್‌ ಶ್ರೀಕಾಂತ್‌, ಅಪರಾದ ವಿಭಾಗದ ಎಎಸೈ ಮಾದೇ ಗೌಡ, ಸಿಬ್ಬಂದಿ ಪರಿಶೀಲನೆ ನಡೆಸಿ ಬಳಿಕ ಶ್ವಾನ ದಳ ಬೆರಳಚ್ಚು ತಜ್ಞರನ್ನು ಕರೆಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next