Advertisement

‘ಈ ವೈದ್ಯರು ನನ್ನ ಕೊಲ್ಲಲು ಕರೆದುಕೊಂಡು ಹೊರಟಿದ್ದಾರೆ’: ವಿಡಿಯೋ ಮಾಡಿ ಸೋಂಕಿತನಿಂದ ಹುಚ್ಚಾಟ

01:46 PM Jun 13, 2021 | Team Udayavani |

ಧಾರವಾಡ: ಕೋವಿಡ್ ಸೋಂಕು ದೃಡಪಟ್ಟು ಮಾನಸಿಕ ಸ್ಥಿಮಿತತೆ ಕಳೆದುಕೊಂಡ ವ್ಯಕ್ತಿಯೊಬ್ಬ ತಾನೇ ತನ್ನ ಮೊಬೈಲ್ ನಿಂದ ವಿಡಿಯೋ ಮಾಡಿ ಹಚ್ಚಾಟ ಮೆರೆದಿದ್ದಾನೆ.

Advertisement

ಧಾರವಾಡ ಸಮೀಪದ ತಡಕೋಡ ಗ್ರಾಮದ ಪರಪ್ಪ ಎಂಬಾತ ಕೋವಿಡ್ ಸೋಂಕಿತ ನಾಗಿದ್ದಾಗ ವೈದ್ಯರು ಆತನನ್ನು ಚಿಕಿತ್ಸೆ ಗಾಗಿ ಜಿಲ್ಲಾ ಆಸ್ಪತ್ರೆ ಗೆ ಕರೆದುಕೊಂಡು ಹೋಗಲು ಬಂದಿದ್ದಾರೆ. ಆಗ ತನ್ನ ಮೊಬೈಲ್ ನಲ್ಲಿ ನಾನೆ ವಿಡಿಯೋ ಮಾಡಿಕೊಂಡು, ಈ ವೈದ್ಯರು ನನ್ನ ಕೊಲ್ಲಲು ಕರೆದುಕೊಂಡು ಹೊರಟಿದ್ದಾರೆ.

ಇದನ್ನೂ ಓದಿ: ಐಎಎಸ್ ಪರೀಕ್ಷೆಗೆ ಕೋಚಿಂಗ್ ಪಡೆಯುವವರಿಗೆ ಸೋನು ಸೂದ್ ನೆರವು..!

ನನ್ನ ಸಾವಿಗೆ ಇವರೆ ಕಾರಣ ಎಂದೆಲ್ಲ ಹುಚ್ಚಾಟ ಮಾಡಿದ್ದಾನೆ. ಕೋವಿಡ್ ಗೆ ಚಿಕಿತ್ಸೆ ಪಡೆದು ಗುಣಮುಖ ನಾಗಿರುವ ಪರಪ್ಪ ಇದೀಗ ಆಗಿನ ವಿಡಿಯೋ ಗಳನ್ನು ತನ್ನ ಗೆಳೆಯರೊಂದಿಗೆ ಹಂಚಿಕೊಂಡಿದ್ದಾನೆ. ಇದನ್ನು ಕೆಲವರು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಇದೀಗ ಪರಪ್ಪನ ಹುಚ್ಚಾಟ ದಾರವಾಡ ಸೀಮೆಯಲ್ಲಿ ವೈರಲ್ ಆಗಿದೆ. ಈತನ ಹುಚ್ಚಾಟದ ಬಗ್ಗೆ ಪೋಲಿಸ್ ರು ಮಾಹಿತಿ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next