Advertisement

ಆಸ್ತಿಗಾಗಿ ಅತ್ತೆಯ ಕತ್ತು ಹಿಸುಕಿ ಕೊಂದ ಸೊಸೆ

01:16 PM Oct 15, 2022 | Team Udayavani |

ಬೆಂಗಳೂರು: ಆಸ್ತಿಯ ವಿಚಾರಕ್ಕಾಗಿ ಅತ್ತೆಯನ್ನೇ ಕೊಲೆ ಮಾಡಿದ ಮಹಿಳೆಯನ್ನು ಶ್ರೀರಾಮ್‌ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಶ್ರೀರಾಮ್‌ಪುರದ ನಿವಾಸಿ ರಾಣಿ (76) ಕೊಲೆಯಾದ ಮಹಿಳೆ. ಸುಗುಣ (46) ಬಂಧಿತೆ.

ರಾಣಿ ತಮ್ಮ ಬಳಿ ಇರುವ ಎಲ್ಲ ಆಸ್ತಿಯನ್ನೂ ಗಂಡು ಮಕ್ಕಳಿಗೆ ಸಮಾನಾಗಿ ಪಾಲು ಮಾಡಿದ್ದರು. ಆ ನಂತರ ರಾಣಿ ಪ್ರತ್ಯೇಕವಾಗಿ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಈ ನಡುವೆ ಎರಡನೇ ಪುತ್ರನ ಪತ್ನಿಯಾಗಿರುವ ಸೊಸೆ ಸುಗುಣ ಮನೆ ಬಿಟ್ಟು ಕೊಡುವಂತೆ ಆಗಾಗ ರಾಣಿಗೆ ಕಿರುಕುಳ ಕೊಡುತ್ತಿದ್ದಳು. ಇಲ್ಲದಿದ್ದರೆ, ಹೊಸ ಮನೆಯ ನಿರ್ಮಿಸಿ ಕೊಡುವಂತೆ ಬೆದರಿಸುತ್ತಿದ್ದಳು. ಅ.12ರಂದು ರಾತ್ರಿ ಮನೆ ಖಾಲಿ ಮಾಡುವಂತೆ ಸೊಸೆ ಹೇಳಿದ್ದಕ್ಕೆ ರಾಣಿ ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ಸುಗುಣ ಅತ್ತೆಯ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಜೋರಾಗಿ ಚೀರಾಟ ಕೇಳಿ ನೆರೆ ಮನೆಯವರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೂಡಲೇ ನೆರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶ್ರೀರಾಮಪುರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಸುಗುಣಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next