Advertisement

ಹೈಕೋರ್ಟ್‌ನಲ್ಲಿ ಗಿಡಮೂಲಿಕೆ ಉದ್ಯಾನ ಉದ್ಘಾಟನೆ

05:11 AM Jun 06, 2020 | Lakshmi GovindaRaj |

ಬೆಂಗಳೂರು: ವಿಶ್ವ ಪರಿಸರ ದಿನಾಚರಣೆಯ ವಿಶಿಷ್ಟ ರೀತಿಯ ಆಚರಣೆಗೆ ಶುಕ್ರವಾರ ಹೈಕೋರ್ಟ್‌ ಸಾಕ್ಷಿಯಾಯಿತು. ಹೈಕೋರ್ಟ್‌ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಗಿಡಮೂಲಿಕೆ ಮತ್ತು ಔಷಧೀಯ ಉದ್ಯಾನಕ್ಕೆ (ಹರ್ಬಲ್‌  ಆ್ಯಂಡ್‌ ಮೆಡಿಸಿನಲ್‌ ಗಾರ್ಡನ್‌) ಚಾಲನೆ ನೀಡಲಾಯಿತು.

Advertisement

ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ತೋಟಗಾರಿಕೆ ಇಲಾಖೆ, ಗಿಡಮೂಲಿಕೆ ಮತ್ತು  ಔಷಧೀಯ ಪ್ರಾಧಿಕಾರ ಮತ್ತು ಆರೋಗ್ಯ ಇಲಾಖೆಯು ಜಂಟಿಯಾಗಿ  ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಗಿಡಮೂಲಿಕೆ ಹಾಗೂ ಔಷಧೀಯ ಉದ್ಯಾನ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ನ್ಯಾ. ಎ.ಎಸ್‌ ಓಕಾ ಚಾಲನೆ ನೀಡಿದರು. ಈ ವೇಳೆ ವಿವಿಧ ರೀತಿಯ ಔಷಧೀಯ ಗಿಡಗಳನ್ನು ನೆಡಲಾಯಿತು.

ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌, ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿಗಳಾದ ಬಿ. ವಿ ನಾಗರತ್ನ, ಅಲೋಕ್‌ ಆರಾಧೆ, ಬಿ. ವೀರಪ್ಪ, ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ರಿಜಿಸ್ಟ್ರಾರ್‌  ಜನರಲ್‌ ರಾಜೇಂದ್ರ ಬಾದಾಮಿಕರ್‌, ವಕೀಲರ ಪರಿಷತ್‌ ಅಧ್ಯಕ್ಷ ಜೆ.ಎಂ.ಅನಿಲ್‌ ಕುಮಾರ್‌, ವಕೀಲರ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next