Advertisement

ಆಯುಷ್ಮಾನ್‌ ಭಾರತ್‌ ಯೋಜನೆ ಉದ್ಘಾಟನೆ

08:42 PM Aug 01, 2019 | Sriram |

ಕಾಸರಗೋಡು: ದ್ವಾರಕ ನಗರದ ಮಯ್ಯ ಐಕೇರ್‌ ಸೆಂಟರ್‌ನಲ್ಲಿ ಆಯುಷ್ಮಾನ್‌ ಭಾರತ್‌, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ, ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆ (ಎಬಿ/ಪಿಎಂಜೆಎವೈ-ಕೆಎಎಸ್‌ಪಿ) ಆ. 1ರಂದು ಉದ್ಘಾಟನೆಗೊಂಡಿತು.

Advertisement

ಶಾಸಕ ಎನ್‌.ಎ.ನೆಲ್ಲಿಕುನ್ನು ಅವರು ಈ ಯೋಜನೆಗಳನ್ನು ಉದ್ಘಾಟಿಸಿದರು. ವಾರ್ಡ್‌ ಕೌನ್ಸಿಲರ್‌ ರವೀಂದ್ರ ಪೂಜಾರಿ, ಕಿಮ್ಸ್‌ ಸನ್‌ರೈಸ್‌ ಆಸ್ಪತ್ರೆಯ ಡಾ| ಬಿ.ಎಸ್‌. ರಾವ್‌ ಶುಭಹಾರೈಸಿದರು. ಸಿಎಚ್‌ಐಎಕೆ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್‌ ಎಂ. ಸತೀಶನ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮಯ್ಯ ಐಕೇರ್‌ ಸೆಂಟರ್‌ನ ಡಾ| ಗಣೇಶ್‌ ಮಯ್ಯ ಅವರು ಸ್ವಾಗತಿಸಿದರು. ಡಾ| ರೇಖಾ ಮಯ್ಯ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next