Advertisement

Bengaluru – Mangaluru ರೈಲು ಮಾರ್ಗ ದುರಸ್ತಿ ಪ್ರಗತಿಯಲ್ಲಿ

01:23 AM Aug 02, 2024 | Team Udayavani |

ಸುಬ್ರಹ್ಮಣ್ಯ: ಬೆಂಗಳೂರು- ಮಂಗಳೂರು ರೈಲು ಮಾರ್ಗದ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಗಲ್‌ನಲ್ಲಿ ಸಂಭವಿಸಿರುವ ಭೂ ಕುಸಿತದ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.

Advertisement

ರೈಲು ಮಾರ್ಗದ ದುರಸ್ತಿ ಕಾರ್ಯ ನಡೆಯುತ್ತಿರುವ ಪ್ರದೇಶದಲ್ಲಿ ಜು.26ರಿಂದ ಸರಾಸರಿ 140 ಮಿ.ಮೀ. ಹಾಗೂ 253 ಮಿ.ಮೀ. ಗರಿಷ್ಠ ಮಳೆಯಾಗಿದ್ದು, ಈ ಪ್ರತಿಕೂಲ ಹವಾಮಾನದ ನಡುವೆಯೂ ದುರಸ್ತಿ ಕಾರ್ಯ ನಡೆಯುತ್ತಿದೆ.

ಈಗಾಗಲೇ 171 ಬಂಡಿಗಳಷ್ಟು ಬಂಡೆಗಳನ್ನು ಹಾಗೂ ಅಗತ್ಯ ಸೊತ್ತು ಗಳನ್ನು ಕಾಮಗಾರಿ ಸ್ಥಳ ದಲ್ಲಿ ಇಳಿಸಲಾಗಿದೆ. ಮರಳು ಚೀಲ ಪೇರಿಸುವ ಕಾರ್ಯ ನಡೆಯುತ್ತಿದೆ. ದುರಸ್ತಿ ಕಾರ್ಯ ಪೂರ್ಣಗೊಳ್ಳಲು ಇನ್ನೂ ಕೆಲವು ದಿನಗಳು ಬೇಕಾಗ ಬಹುದು ಎಂದು ತಿಳಿದುಬಂದಿದೆ. ಶೀಘ್ರ ದುರಸ್ತಿ ಕಾರ್ಯ ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next