Advertisement

2018ರ ಚುನಾವಣೆಯಲ್ಲಿ ಜೆಡಿಎಸ್‌ಗೆ 18 ಸೀಟು

06:50 AM Sep 18, 2017 | Team Udayavani |

ಕುಣಿಗಲ್‌: “ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಜ್ಯಾತ್ಯತೀತ ವಿರೋಧಿಯಾಗಿದ್ದಾರೆ.
ಹೀಗಾಗಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಕೇವಲ 18-20 ಸೀಟುಗಳನ್ನು ಮಾತ್ರ
ಪಡೆಯಲಿದೆ’ ಎಂದು ಶಾಸಕ ಜಮೀರ್‌ ಅಹಮದ್‌ ಭವಿಷ್ಯ ನುಡಿದಿದ್ದಾರೆ. 

Advertisement

ತಾಲೂಕಿನ ಹುಲಿಯೂರು ದುರ್ಗದಲ್ಲಿ ಮಾತನಾಡಿದ ಅವರು, “ರಾಜ್ಯಸಭೆ ಚುಣಾವಣೆ ವೇಳೆ ಅಡ್ಡ ಮತದಾನ ಮಾಡಲು ಕುಮಾರಸ್ವಾಮಿಯವರೇ ನನಗೆ ತಿಳಿಸಿದ್ದರು. ಆದರೂ, ನಾನು ಅಡ್ಡ ಮತನಾದ ಮಾಡಲಿಲ್ಲ.
ರಾಜಕೀಯವಾಗಿ ಮುಗಿಸುವ ಸಲುವಾಗಿ ಸಂಚು ರೂಪಿಸಿ ನನ್ನನ್ನು ಪಕ್ಷದಿಂದ ಹೊರ ಹಾಕುವ ಏಕೈಕ ಉದ್ದೇಶದಿಂದ ಆರೋಪ ಮಾಡಲಾಗುತ್ತಿದೆ. ನನ್ನ ಮಾತನ್ನು ಒಪ್ಪದಿದ್ದರೆ ನಾನು ಕುರಾನ್‌ ಮೇಲೆ ಪ್ರಮಾಣ ಮಾಡುತ್ತೇನೆ.

ಕುಮಾರಸ್ವಾಮಿ ಅವರು ಮನೆ ದೇವರ ಮೇಲೆ ಪ್ರಮಾಣ ಮಾಡಲು ಸಿದಟಛಿರಿದ್ದಾರೆಯೇ?’ ಎಂದು ಸವಾಲು ಹಾಕಿದರು. ಜನತೆಯ ಆಶೀರ್ವಾದ ಇರುವ ತನಕ ಯಾರೂ ನಮ್ಮನ್ನು ಮುಗಿಸಲು ಸಾಧ್ಯವಿಲ್ಲ ಎಂದು ಗುಡುಗಿದ ಅವರು, ಮುಂದಿನ ಚುನಾವಣೆಯಲ್ಲಿ ಮುಸಲ್ಮಾನರ ಶಕ್ತಿ ಏನು ಎಂಬುದನ್ನು ಕುಮಾರಸ್ವಾಮಿಗೆ ತೋರಿಸಬೇಕು ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next