Advertisement
ಟ್ವೀಟ್ ಗಳಿಗೆ ತ್ವರಿತ ಸ್ಪಂದನೆಯಾರೇ ಸಹಾಯ ಕೇಳಿ ಟ್ವೀಟ್ ಮಾಡಲಿ ಅದಕ್ಕೆ ಕೂಡಲೇ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದವರು ಸುಷ್ಮಾ. ಇವರು ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದುದರಿಂದ ಪ್ರಧಾನಿ ಮೋದಿ ಸಂಪುಟದ ಇತರ ಸಚಿವರಿಗೂ ಅವರು ಒಂದು ರೀತಿಯಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟರು. ಇದರಿಂದಾಗಿ ಇತರ ಸಚಿವರೂ ತಮ್ಮ ಸಚಿವಾಲಯಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳನ್ನು ಸ್ವೀಕರಿಸುವ, ಪರಿಹಾರವನ್ನು ಒದಗಿಸುವ ಪ್ರಯತ್ನವನ್ನು ಮಾಡುತ್ತಿದ್ದುದಂತೂ ಸತ್ಯ.
Related Articles
Advertisement
ಆಪರೇಷನ್ ಹಿಂದಿನ ಅಮ್ಮಯುದ್ಧ ಸಂತ್ರಸ್ತ ಪ್ರದೇಶಗಳಲ್ಲಿ ಭಾರತೀಯರು ಸಿಕ್ಕಾಗ ನೆರವಿಗೆ ಬಂದಿದ್ದು ಸುಷ್ಮಾ. ಇದಕ್ಕಾಗಿ ಇಡೀ ಸರಕಾರದ ಹಿರಿಯ ಅಧಿಕಾರಿಗಳನ್ನು ಸಮರ್ಥವಾಗಿ ದುಡಿಸಿಕೊಂಡರು. 2015ರಲ್ಲಿ ಮೊದಲ ಬಾರಿಗೆ ಯೆಮೆನ್ನಲ್ಲಿ 4 ಸಾವಿರ ಭಾರತೀಯರು ಸಿಲುಕಿದ್ದಾಗ ಯುದ್ಧ ಹಡಗುಗಳನ್ನು ಕಳಿಸಿ 11 ದಿನ ಕಾರ್ಯಾಚರಣೆ ನಡೆಸಲಾತು. ಏಡೆನ್ ಬಂದರಿನಲ್ಲಿ ಹಡಗು ನಿಲ್ಲಿಸಿ, ಈ ಕಾರ್ಯಾಚರಣೆ ನಡೆಸಿತ್ತು. ಅದರ ನಂತರ ವಿಶ್ವಾದ್ಯಂತ ಹಲವು ಅನಿಶ್ಚಿತತೆಗಳಾದಾಗ ಸುಷ್ಮಾ ಭಾರತೀಯರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಭಾರೀಯರು ವಿದೇಶದಲ್ಲಿ ಕಾನೂನಾತ್ಮಕ ಸಮಸ್ಯೆಗಳಿಂದ ಸಿಲುಕಿದ್ದಾಗ, ಪಾಸ್ ಪೋರ್ಟ್ ಕಳವು ಇತ್ಯಾದಿ ಸಮಸ್ಯೆಯಾದಾಗಲೂ ತ್ವರಿತವಾಗಿ ಸ್ಪಂದಿಸಿದರು. ಕೆಲಸ ಮಾಡಿಕೊಡಲು ಅರ್ಜಿಯೇ ಬೇಡ!
ಅರ್ಜಿ ಕೊಟ್ಟು ವರ್ಷವಾದರೂ ಸರಕಾರದ ಕೆಲಸವಾಗಲ್ಲ ಎಂಬಂತಿರುವ ಸ್ಥಿತಿಯಲ್ಲಿ ಒಂದು ಟ್ವೀಟ್ ಮಾಡಿದರೆ ಸಾಕು ಕೆಲಸ ಪಕ್ಕಾ ಎಂಬ ಸ್ಥಿತಿಗೆ ಬಂದಿದ್ದು ಸುಷ್ಮಾ ಅವರಿಂದಾಗಿ. ವಿದೇಶಾಂಗ ಇಲಾಖೆ ಕುರಿತಾಗಿ ಯಾರೇ ಟ್ವೀಟ್ ಮಾಡಿದರೂ ಅದು ನೆರವೇರುತ್ತಿತ್ತು. ಭಾರತೀಯರೇಕೆ ವಿದೇಶೀಯರಿಗೂ ಈ ನೆರವು ಇತ್ತು. ಹೌತಿಯ ಬಂಡುಕೋರರಿಂದ ವಿವಿಧ ದೇಶಗಳ ಪ್ರಜೆಗಳನ್ನು ಆ ದೇಶಗಳ ಟ್ವೀಟ್ ಮನವಿ ಮೇರೆಗೆಅವರು ಪಾರು ಮಾಡಿದ್ದರು. ಪಾಕಿಸ್ಥಾನೀಯರು ಭಾರತದಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಮೊದಲು ಸುಷ್ಮಾಗೆ ಟ್ವೀಟ್ ಮಾಡುವಂತಾಯ್ತು. ಭಾರತ – ಪಾಕ್ ಸಂಬಂಧ ಹದಗೆಟ್ಟಿದ್ದರೂ ಅಲ್ಲಿನವರು ಭಾರತಕ್ಕೆ ಚಿಕಿತ್ಸೆಗೆ ಆಗಮಿುಸುವುದಾದರೆ ನಮ್ಮ ಮಾನವೀಯ ಕಳಕಳಿ ಇದ್ದೇ ಇದೆಎಂಬುದನ್ನೂ ಸುಷ್ಮಾ ಅವರು ಸಾರಿದರು. ಇದಕ್ಕಾಗಿ ಹಲವಾರು ಸಂದರ್ಭಗಳಲ್ಲಿ ಅವರು ಆಸ್ಪತ್ರೆ ವ್ಯವಸ್ಥೆಯನ್ನೂ ಮಾಡುವಲ್ಲಿವರೆಗೆ ಮುಂದುವರಿದಿದೆ. ಈ ಕಾರಣಕ್ಕಾಗಿಯೇ ಅವರು ಎಲ್ಲರ ಮಾನವೀಯ ಮುಖದ ಸಚಿವೆಯಾಗಿ ಮಿಂಚಿದರು. – ಈಶ