Advertisement

ಅಂತರ್ಜಾತಿ ವಿವಾಹ ಹಿನ್ನೆಲೆ: ಹೈದರಾಬಾದ್‌ನಲ್ಲಿ ಹಲ್ಲೆ

06:00 AM Sep 20, 2018 | Team Udayavani |

ಹೈದರಾಬಾದ್‌: ಅಂತರ್ಜಾತಿಯ ವಿವಾಹವಾಗಿರುವ ಮತ್ತೂಂದು ಯುವ ಜೋಡಿ ಮೇಲೆ ಹೈದರಾಬಾದ್‌ನಲ್ಲಿ ಹಲ್ಲೆ ನಡೆಸಲಾಗಿದೆ. ಯುವತಿಯ ತಂದೆಯೇ ಈ ಕೃತ್ಯವೆಸಗಿದ್ದಾನೆ. ಮಾಧವಿ ಮತ್ತು ಸಂದೀಪ್‌ ಎಂಬುವರು ಹೆತ್ತವರ ಆಶಯಕ್ಕೆ ವಿರುದ್ಧವಾಗಿ ವಿವಾಹವಾಗಿದ್ದರು. ಮಗಳನ್ನು ಭೇಟಿಯಾಗಬೇಕು ಎಂದು ತಂದೆ ಮನೋಹರಾಚಾರಿ ಹೇಳಿದ್ದ. ಅದನ್ನು ನಿರಾಕರಿಸಲು ಸಾಧ್ಯವಾಗದ ಯುವ ದಂಪತಿ ಹೈದರಾಬಾದ್‌ನ ಮುತ್ತಿನ ನಗರಿಯ ಎಸ್‌.ಆರ್‌.ನಗರದಲ್ಲಿ ಭೇಟಿಯಾಗುವುದಾಗಿ ಸಮಯ ನಿಗದಿಪಡಿಸಿದರು. ಸ್ಥಳಕ್ಕೆ ಅವರು ಬರುತ್ತಿದ್ದಂತೆಯೇ ಸಂದೀಪ್‌ ಮತ್ತು ಮಾಧವಿ ಮೇಲೆ ಮನಬಂದಂತೆ ಥಳಿಸಿದ್ದಾನೆ. ಈ ಘಟನೆಯಿಂದ ಮಾಧವಿ ಆಘಾತಕ್ಕೆ ಒಳಗಾಗಿದ್ದು ಮಾತ್ರವಲ್ಲದೆ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿ ದ್ದಾರೆ. ಅವರ ಪತಿ ಸಂದೀಪ್‌ಗೆ ಕೂಡ ಭಾರಿ ಪ್ರಮಾಣದಲ್ಲಿ ಗಾಯಗಳಾಗಿವೆ. ಪೊಲೀಸರು ಕೇಸು ದಾಖಲಿಸಿ ತಂದೆಗಾಗಿ ಶೋಧ ನಡೆಸಿದ್ದಾರೆ. ಇಬ್ಬರು ಕಲಿಯುತ್ತಿರುವ ವೇಳೆ ಪ್ರೇಮಾಂಕುರವಾಗಿತ್ತು. ಮಾಧವಿ ಕುಟುಂಬವರು ಮೇಲ್ವರ್ಗಕ್ಕೆ ಸೇರಿದವರು. ಹೀಗಾಗಿ, ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಕಳೆದ ವಾರ ನಲ್ಗೊಂಡಾದಲ್ಲಿ ಮೇಲ್ಜಾತಿ ಯುವತಿ ಮದುವೆಯಾಗಿದ್ದ R ದಲಿತ ಕ್ರಿಶ್ಚಿಯನ್‌ ಸಮುದಾಯದ ಯುವಕನನ್ನು 1 ಕೋಟಿ ರೂ. ನೀಡಿ ಹತ್ಯೆ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next