Advertisement

ದೆಹಲಿಯಲ್ಲಿ ಹೊಗೆ ತಪಾಸಣಾ ಪತ್ರವಿದ್ದರೆ ಮಾತ್ರ ಇಂಧನ

08:31 PM Oct 01, 2022 | Team Udayavani |

ನವದೆಹಲಿ: ವಾಯುಮಾಲಿನ್ಯದಲ್ಲಿ ದಾಖಲೆ ಬರೆದಿರುವ ನವದೆಹಲಿ ಇದೀಗ ಮಾಲಿನ್ಯ ನಿಯಂತ್ರಣಕ್ಕೆ ಹೊಸ ಹೆಜ್ಜೆ ಇಟ್ಟಿದೆ.

Advertisement

ಅ.25ರಿಂದ ದೆಹಲಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನಗಳ ಹೊಗೆ ತಪಾಸಣಾ ಪತ್ರಗಳನ್ನು (ಪಿಯುಸಿ) ತೋರಿಸಿದರೆ ಮಾತ್ರವೇ ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕಲಾಗುವುದು. ಹೀಗೆಂದು ದೆಹಲಿಯ ಪರಿಸರ ಸಚಿವ ಗೋಪಾಲ್‌ ರಾಯ್‌ ತಿಳಿಸಿದ್ದಾರೆ.

“ದೆಹಲಿ ಸಾರಿಗೆ ಇಲಾಖೆ ವರದಿ ಪ್ರಕಾರ ರಾಜ್ಯದಲ್ಲಿ 17 ಲಕ್ಷ ವಾಹನಗಳು(13 ಲಕ್ಷ ದ್ವಿಚಕ್ರ ವಾಹನ, 4 ಲಕ್ಷ ಕಾರುಗಳು) ಹೊಗೆ ತಪಾಸಣಾ ಪತ್ರವಿಲ್ಲದೆಯೇ ಸಂಚಾರ ನಡೆಸುತ್ತಿವೆ.

ವಾಯುಮಾಲಿನ್ಯಕ್ಕೆ ವಾಹನಗಳ ಕೊಡುಗೆಯೇ ಹೆಚ್ಚಿದೆ. ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಂತದ್ದೊಂದು ಕಠಿಣ ನಿಯಮ ಜಾರಿಗೆ ತರಲಾಗುತ್ತಿದೆ’ ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next