Advertisement

“25 ಲಕ್ಷ ರೂ. ವೆಚ್ಚದಲ್ಲಿ ಜಪ್ಪಿನಮೊಗರು ಕೆರೆ ಅಭಿವೃದ್ಧಿ’

09:57 AM May 25, 2020 | mahesh |

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಜಪ್ಪಿನಮೊಗರು ವಾರ್ಡಿನ ಕಂರ್ಬಿಸ್ಥಾನ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್‌ ಕಾಮತ್‌ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ಕಾಮತ್‌, ಜಪ್ಪಿನಮೊಗರು ವಾರ್ಡಿನ ಪಾಲಿಕೆ ಸದಸ್ಯರ ಹಾಗೂ ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದ ಕಂರ್ಬಿಸ್ಥಾನ ಕ್ಷೇತ್ರ ಪರಿಸರದ ಕೆರೆಯ ಪುನರುಜ್ಜೀವನಕ್ಕೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರಥಮ ಹಂತದ 25 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಈ ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

Advertisement

ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ಕೆಲವೊಂದು ಕೆರೆಗಳ ಅಭಿವೃದ್ಧಿ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ. ನಗರ ವ್ಯಾಪ್ತಿಯ ಕೆರೆಗಳನ್ನು ಜನರಿಗೆ ಉಪಯೋಗ ಯೋಗ್ಯವಾಗುವಂತೆ ಅಭಿವೃದ್ಧಿ ಪಡಿಸಿ ಸಂರಕ್ಷಿಸುವ ಯೋಜನೆ ಯಿದೆ. ನಗರ ಬೆಳೆಯುವ ಕಾಲ ಘಟ್ಟದಲ್ಲಿ ಕುಡಿಯುವ ನೀರಿನ ಮೂಲ ಗಳನ್ನೂ ಅಭಿವೃದ್ಧಿಪಡಿಸುವುದೂ ಮಹತ್ವ ಪೂರ್ಣ ವಾದದ್ದು ಎಂದು ಶಾಸಕರು ಹೇಳಿದರು.

ಪಾಲಿಕೆ ಮೇಯರ್‌ ದಿವಾಕರ್‌ ಪಾಂಡೇಶ್ವರ, ಸ್ಥಳೀಯ ಪಾಲಿಕೆ ಸದಸ್ಯೆ ವೀಣಾ ಮಂಗಳ, ಮಂಗಳೂರು ನಗರಾ ಭಿವೃದ್ಧಿ ಪ್ರಾಧಿಕಾರ ಆಯುಕ್ತ ದಿನೇಶ್‌ ಕುಮಾರ್‌, ಬಿಜೆಪಿ ಮುಖಂಡರಾದ ಪುಷ್ಪರಾಜ್‌, ಸಂದೇಶ್‌, ಪ್ರಾಣೇಶ್‌, ಪ್ರವೀಣ್‌ ಕುಮಾರ್‌, ನಿತೇಶ್‌, ಸಂಜಯ್‌, ವಿಶ್ವನಾಥ್‌ ಆಳ್ವ, ದೀಕ್ಷಿತ್‌, ಚಿತ್ತರಂಜನ್‌, ಮನೋಜ್‌, ಗಣೇಶ್‌ ಸಾಲ್ಯಾನ್‌, ಗಣೇಶ್‌ ಶೆಟ್ಟಿ, ಗಣೇಶ್‌ ಗುಡ್ಡೆಗುತ್ತು, ಭುಜಂಗ ಶೆಟ್ಟಿ, ಅನಿಲ್‌ ಮಂಕುತೋಟ, ಸಂತೋಷ್‌ ಆಳ್ವ, ಆರತಿ ಶೇಟ್‌ ಪ್ರಕಾಶ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next