Advertisement

ಹದಗೆಟ್ಟ ಅಂಗಾರಕಟ್ಟೆ ಪಡುಬೆಟ್ಟು ರಸ್ತೆ: ಸಂಚಾರ ದುಸ್ತರ

10:38 PM Mar 02, 2020 | Sriram |

ಹಿರಿಯಡಕ: ಓಂತಿಬೆಟ್ಟು ಗ್ರಾ.ಪಂ. ವ್ಯಾಪ್ತಿಗೆ ಬರುವ ಅಂಗಾರಕಟ್ಟೆ -ವರ್ವಾಡಿ-ಪಡುಬೆಟ್ಟು ರಸ್ತೆ ಕಳೆದ ಎರಡು ವರ್ಷಗಳಿಂದ ಹದಗೆಟ್ಟು ಹೋಗಿದ್ದು ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ.

Advertisement

ಈ ರಸ್ತೆ ಸಂಪೂರ್ಣ ಹೊಂಡಮಯವಾಗಿದೆ. ಕಳೆದೆರಡು ವರ್ಷದಿಂದ ಈ ಸ್ಥಿತಿ ಇದೆ. ಮಳೆಗಾಲ ಸಂದರ್ಭ ರಸ್ತೆ ಸಂಪೂರ್ಣವಾಗಿ ನದಿ ಯಂತಾಗುತ್ತದೆ. ಹಲವಾರು ಮಂದಿ ಕೆಲಸಕ್ಕೆ, ಶಾಲೆಗೆ ಇದೇ ರಸ್ತೆಯ ಮೂಲಕ ಹೋಗುತ್ತಾರೆ. ಶಾಲೆ ವಾಹನಗಳು ಖಾಸಗಿ ವಾಹನಗಳು ಬಸ್ಸುಗಳೂ ಸಂಚರಿಸುತ್ತವೆ. ರಸ್ತೆ ಹೊಂಡದಿಂದಾಗಿ ಅನೇಕ ಮಂದಿ ದ್ವಿಚಕ್ರ ವಾಹನ ಸವಾರರು ಕೆಳಗೆ ಬಿದ್ದು ಗಾಯಗೊಂಡ ಉದಾ ಹರಣೆಗಳೂ ಇವೆ. ಚುನಾವಣೆ ಬಂದಾಗ ಮತ ಯಾಚಿಸಲು ಮಾತ್ರ ಇದೇ ರಸ್ತೆಯಲ್ಲಿ ಬರುವ ಜನಪ್ರತಿ ನಿಧಿಗಳಿಗೆ ಚುನಾವಣೆ ಮುಗಿದ ಬಳಿಕ ಈ ರ‌ಸ್ತೆಯ ಸಮಸ್ಯೆಗಳು ಕಾಣದೇ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಗಮನ ಸೆಳೆಯಲು ಬ್ಯಾನರ್‌
ರಸ್ತೆ ರಿಪೇರಿಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಹೊಂಡಗಳಿಗೆ ಮಣ್ಣು ತುಂಬಿಸಿದ್ದು, ಆದರೆ ಅದೂ ಹೋಗುತ್ತಿದೆ. ರಸ್ತೆ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆದಿದ್ದರೂ ಸಮಸ್ಯೆ ಹಾಗೇ ಉಳಿದಿದೆ. ಈ ಕಾರಣ ಈಗ ರಸ್ತೆ ಬದಿಯಲ್ಲೇ ಬ್ಯಾನರ್‌ ಹಾಕಿ ಗಮನ ಸೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next