Advertisement
ಸದನದಲ್ಲಿ ಬುಧವಾರ ವಿಧೇಯಕ ಮಂಡಿಸಿದ ಕೇಂದ್ರ ವಿತ್ತ ಇಲಾಖೆ ಸಹಾಯಕ ಸಚಿವ ಅನುರಾಗ್ ಠಾಕೂರ್, ‘ಹೊಸ ವಿಧೇಯಕದಲ್ಲಿ ಚೀಟಿ ವ್ಯವಹಾರದಲ್ಲಿ ತೊಡಗಿಸುವ ಮೊತ್ತವನ್ನು ‘ಸಮಾನ ಮನಸ್ಕರ ಸಮೂಹದ ನಿಧಿ’, ‘ಆವರ್ತಕ ಉಳಿತಾಯ’ ಎಂದು ಸಂಬೋಧಿಸಲಾಗಿದೆ. ಚೀಟಿ ನಡೆಸುವ ಸಂಸ್ಥೆ ಅಥವಾ ವ್ಯವಸ್ಥೆಯನ್ನು ‘ಸಾಲ ನೀಡುವ ಸಂಸ್ಥೆ’ ಎಂದು ಪರಿಗಣಿಸಲಾಗಿದೆ. ಈ ಮೂಲಕ, ಚೀಟಿ ವ್ಯವಹಾರಕ್ಕೆ ಸಮಾಜದಲ್ಲಿ ಒಂದು ಗೌರವದ ಸ್ಥಾನಮಾನ ತಂದುಕೊಡಲು ಪ್ರಯತ್ನಿಸಲಾಗಿದೆ’ ಎಂದು ತಿಳಿಸಿದರು.
Related Articles
Advertisement
ತಿದ್ದುಪಡಿಗೆ ಸಲಹೆ: ಬಾಡಿಗೆ ತಾಯ್ತನ(ನಿಬಂಧನೆ) ವಿಧೇಯಕ 2019ರಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವಂತೆ ರಾಜ್ಯಸಭೆ ಸದಸ್ಯರು ಆಗ್ರಹಿಸಿದ್ದಾರೆ. ಈ ವಿಧೇಯಕಕ್ಕೆ ಪಕ್ಷಭೇದ ಮರೆತು ಬಹುತೇಕ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಆದರೂ, ಗರ್ಭಪಾತಕ್ಕಿರುವ ಕಾಲಾವಧಿ, ವಯಸ್ಸಿನ ಮಿತಿ, ಪೂರ್ವ ಸಮ್ಮತಿ, ಮದುವೆಯಾಗಿ 5 ವರ್ಷಗಳಾಗಿರಬೇಕು ಎಂಬಿತ್ಯಾದಿ ನಿಬಂಧನೆಗಳಿಗೆ ತಿದ್ದುಪಡಿ ತರಬೇಕು ಎಂದು ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಆಧಾರ್ಗೆ ಲಿಂಕ್ ಇಲ್ಲಜನರ ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಲಿಂಕ್ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್ಎನ್ಎಲ್ ಅನ್ನು ಆದಷ್ಟು ಬೇಗ ಪುನಶ್ಚೇತನಗೊಳಿಸಲಾಗುವುದು ಮತ್ತು ಲಾಭದಾಯಕ ಸಂಸ್ಥೆಯನ್ನಾಗಿ ರೂಪಿಸಲಾಗುವುದು ಎಂದೂ ಪ್ರಸಾದ್ ಭರವಸೆ ನೀಡಿದ್ದಾರೆ. ಈ ನಡುವೆ, ಒಂದು ದೇಶ, ಒಂದೇ ಭಾಷೆ ಎಂಬ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ನಮ್ಮ ಸಂವಿಧಾನವು ಎಲ್ಲ ಭಾಷೆಗಳಿಗೂ ಸಮಾನ ಮಹತ್ವವನ್ನು ನೀಡುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವಿಧೇಯಕದ ಮುಖ್ಯಾಂಶ
– ವೈಯಕ್ತಿಕವಾಗಿ ನಿರ್ವಹಣೆಯಾಗುವ ಅಥವಾ ಕನಿಷ್ಠ 4 ಜನರಿರುವ ಚೀಟಿ ವ್ಯವಹಾರದಲ್ಲಿ ತೊಡಗಿಸಲ್ಪಡುವ ಚೀಟಿಯ ಮೊತ್ತ 1 ಲಕ್ಷ ರೂ.ಗಳಿಂದ 3 ಲಕ್ಷಕ್ಕೆ ಏರಿಕೆ
– ಸಂಸ್ಥೆಗಳು ಅಥವಾ ನಾಲ್ವಕ್ಕಿಂತ ಹೆಚ್ಚು ಜನರು ನಡೆಸುವ ಚೀಟಿಯ ಮೊತ್ತವನ್ನು ಗರಿಷ್ಠ 6ರಿಂದ 18 ಲಕ್ಷ ರೂ.ಗಳಿಗೆ ಏರಿಕೆ
– ಚೀಟಿ ನಿರ್ವಹಿಸುವ ವ್ಯಕ್ತಿಗೆ ನೀಡಲಾಗುವ ಕಮಿಷನ್ ಶೇ. 5ರಿಂದ 7ಕ್ಕೆ ಏರಿಕೆ
– ಚೀಟಿ ವ್ಯವಹಾರ ನಿರ್ವಾಹಕನಿಗೆ ಚೀಟಿ ಕಟ್ಟದ ಚಂದಾದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ
– ವಿಡಿಯೋ ಕಾನ್ಫರೆನ್ಸ್ ಮೂಲಕ ಚೀಟಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸದಸ್ಯರಿಗೆ ಅವಕಾಶ
– ಚೀಟಿ ಹಣ, ಡಿವಿಡೆಂಡ್, ಬಹುಮಾನ ಮೊತ್ತ ಪದಗಳ ಬದಲಾಗಿ ಒಟ್ಟು ಚೀಟಿ ಹಣ, ವಿನಾಯ್ತಿಯ ಹಂಚಿಕೆ ಹಾಗೂ ನೆಟ್ ಚಿಟ್ ಫಂಡ್ ಪದಗಳೊಂದಿಗೆ ಬಳಸಲು ಸಲಹೆ
– ಚೀಟಿ ವ್ಯವಹಾರದಲ್ಲಿ ತೊಡಗಿಸಬಹುದಾದ ಕನಿಷ್ಟ ಹಣದ ಮೊತ್ತ (100 ರೂ.) ರದ್ದು. ಈ ಕುರಿತಂತೆ ಸೂಕ್ತ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ.