Advertisement

ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವೆ: ಸಚಿವ ಪ್ರಭು ಚವ್ಹಾಣ

12:41 PM Nov 25, 2021 | Team Udayavani |

 

Advertisement

ಭಾಲ್ಕಿ: ಸಾರ್ವಜನಿಕರ ಯಾವುದೆ ಸಮಸ್ಯೆ ಇದ್ದಲ್ಲಿ ನೇರವಾಗಿ ತನ್ನನ್ನು ಸಂಪರ್ಕಿಸಿದರೆ ತಕ್ಷಣ ಸ್ಪಂದಿಸುವುದಾಗಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಭರವಸೆ ನೀಡಿದ್ದಾರೆ.

ಪಟ್ಟಣದ ಬೋಚರೆ ನಿವಾಸದಲ್ಲಿ ಬೋಚರೆ ಪರಿವಾರದವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪಶು ಇಲಾಖೆಯಲ್ಲಿಯ ಯಾವುದೇ ತೊಂದರೆಗಳಿದ್ದಲ್ಲಿ ಸಾರ್ವಜನಿಕರು ತನ್ನನ್ನು ನೇರವಾಗಿ ಸಂಪರ್ಕಿಸಿ ಮಾತನಾಡಿದ್ದಲ್ಲಿ ತಕ್ಷಣ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುವೆ. ರಾಜ್ಯದ ಯಾವುದೆ ವ್ಯಕ್ತಿಯು, ಯಾವುದೇ ಸಮಸ್ಯೆಗಳಿಂದ ಬಳಲಬಾರದು ಎಂದರು.

ಔರಾದ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಠಾಣಾ ಕುಸನೂರ ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ ಸಜ್ಜನಶೆಟ್ಟಿ, ಕಂಟೆಪ್ಪಾ ಜೀರ್ಗೆ, ರಾಜೇಂದ್ರ ಮಾನಕಾರಿ, ತುಕಾರಾಮ ಮೋರೆ, ಡಾ| ನೀಲೇಶ ಟೊಪಾರೆ, ಶ್ವೇತಾ ಸುನೀಲ ಸೇರಿದಂತೆ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next