Advertisement

ಆರ್ಥಿಕ ಹಿಂಜರಿತ ತಡೆಗೆ ಭಾರತ ಶೀಘ್ರವೇ ತುರ್ತು ಕ್ರಮ ಕೈಗೊಳ್ಳಬೇಕು; ಐಎಂಎಫ್

10:00 AM Dec 25, 2019 | Nagendra Trasi |

ವಾಷಿಂಗ್ಟನ್: ಜಾಗತಿಕವಾಗಿ ಅಭಿವೃದ್ದಿಯ ಬೆಳವಣಿಗೆಯ ನಿಟ್ಟಿನಲ್ಲಿ ಭಾರತ ತಕ್ಷಣವೇ ಆರ್ಥಿಕ ಹಿಂಜರಿತಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಸಲಹೆ ನೀಡಿದೆ.

Advertisement

ಹೂಡಿಕೆ ಮತ್ತು ಬಳಕೆ ಪ್ರಮಾಣ ಕುಸಿತವಾಗಿದೆ. ತೆರಿಗ ಆದಾಯ ಕೂಡಾ ಇಳಿಕೆಯಾಗುತ್ತಿರುವುದು ಜಾಗತಿಕ ಆರ್ಥಿಕ ಅಭಿವೃದ್ಧಿ ಸಾಧಿಸುವಲ್ಲಿ ಅಡ್ಡಿಯಾಗುತ್ತಿದೆ ಎಂದು ಐಎಂಎಫ್ ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಲಕ್ಷಾಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಿದ ನಂತರವೂ ಭಾರತ ಇದೀಗ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದೆ ಎಂದು ಐಎಂಎಫ್ ಏಷ್ಯಾ ಮತ್ತು ಫೆಸಿಪಿಕ್ ಇಲಾಖೆಯ ರನಿಲ್ ಸಲ್ಗಾಡೋ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಪ್ರಸ್ತುತ ಆರ್ಥಿಕ ಹಿಂಜರಿತವನ್ನು ಪರಿಶೀಲಿಸುವ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸಲು ಭಾರತ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಏತನ್ಮಧ್ಯೆ ಆರ್ಥಿಕ ಬೆಳವಣಿಗೆಗೆ ಚೇತರಿಕೆ ನೀಡಲು ಭಾರತಕ್ಕೆ ಸೀಮಿತ ಅವಕಾಶ ಮಾತ್ರ ಇದೆ ಎಂದು ಐಎಂಎಫ್ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next