Advertisement

IMD:ಬಿರು ಬಿಸಿಲು ಉತ್ತಮ ಮುಂಗಾರು ಮಳೆಗೆ ದಾರಿ

12:45 AM Apr 06, 2024 | Team Udayavani |

ಹೊಸದಿಲ್ಲಿ: ಸದ್ಯ ದೇಶದಲ್ಲಿ ಸುಡುತ್ತಿರುವ ಬಿಸಿಲು ಉತ್ತಮ ಮುಂಗಾರು ಮಳೆಯಾಗುವ ಮನ್ಸೂಚನೆ ಯಾ ಗಿದೆ. ಹೀಗೆಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ತಿಳಿಸಿದ್ದಾರೆ. ಆತಂಕಕಾರಿ ಎಲ್‌ ನಿನೋ ಪರಿಸ್ಥಿತಿ ಈ ವರ್ಷ ಮರೆಯಾಗಿದೆ ಎಂದಿದ್ದಾರೆ. ಜತೆಗೆ ದೊಡ್ಡ ಪ್ರಮಾಣದ ಹವಾಮಾನ ಬದಲಾವಣೆ ಮುಂಗಾರಿಗೆ ದಾರಿ ಮಾಡಿಕೊಡಲಿದೆ. ಈ ವರ್ಷ ಎಲ್‌ ನಿನೋ ಆತಂಕ ಮರೆಯಾಗಿದ್ದು ಜೂನ್‌ ಆರಂಭದ ವೇಳೆಗೆ ಎಲ್‌ ನಿನೋ ತಟಸ್ಥ ಸ್ಥಿತಿಗೆ ತಲುಪಬಹುದು.

Advertisement

ಕೇಂದ್ರ ಪೆಸಿಫಿಕ್‌ ಮಹಾಸಾಗರದಲ್ಲಿನ ಬಿಸಿ ವಾತಾವರಣ ನೈಋತ್ಯ ಮುಂಗಾರಿನ ಮೇಲೆ ಪರಿಣಾಮ ಬೀರಲಿದೆ. ಜತೆಗೆ ಜುಲೈ-ಸೆಪ್ಟಂಬರ್‌ ಮಳೆ ಲಾ ನಿನಾ ಪರಿಸ್ಥಿಗೆ ಸಾಕ್ಷಿಯಾಗಲಿದೆ. ಲಾ ನಿನಾ ಪರಿಸ್ಥಿತಿ ಮುಂಗಾರು ಮಳೆಗೆ ಉತ್ತಮವಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next