Advertisement

IMA scam: 200 ಕೋಟಿ ಆಸ್ತಿ ಹಂಚಿಕೆ ಸವಾಲು

02:30 PM Dec 28, 2023 | Team Udayavani |

ಬೆಂಗಳೂರು:  ಐ ಮಾನಿಟರಿ ಅಡ್ವೆ„ಸರಿಗೆ (ಐಎಂಎ) ಸೇರಿದ 200 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಸಂತ್ರಸ್ತರಿಗೆ ಹಂಚಲು ಸಕ್ಷಮ ಪ್ರಾಧಿಕಾರಕ್ಕೆ ಜಾರಿ ನಿರ್ದೇಶನಾಲಯದಿಂದ (ಇಡಿ) ತೊಡಕಾಗಿದ್ದು, ಸಂತ್ರಸ್ತರಿಗೆ ಸಂಪೂರ್ಣ ಪರಿಹಾರ ಸಿಗುವುದೇ ಮರೀಚಿಕೆಯಾಗಿದೆ.

Advertisement

ಅಧಿಕ ಲಾಭಾಂಶದ ಆಮಿಷವೊಡ್ಡಿ 55 ಸಾವಿರಕ್ಕೂ ಹೆಚ್ಚಿನ ಜನರಿಂದ 1,400 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಐಎಂಎ ಪ್ರಕರಣದಲ್ಲಿ ಸಂತ್ರಸ್ತರಿಗೆ ಸದ್ಯಕ್ಕೆ ಪರಿಹಾರ ಸಿಗುವುದೇ ಅನುಮಾನ ಎನ್ನಲಾಗುತ್ತಿದೆ. ಐಎಂಎ ಸಂಸ್ಥೆಗೆ ಸೇರಿದ ಒಟ್ಟು 300 ಕೋಟಿ ರೂ. ಮೌಲ್ಯದ ಚಿರ ಹಾಗೂ ಸ್ಥಿರ ಆಸ್ತಿಯನ್ನು ಇದುವರೆಗೆ ಐಎಂಎ ಸಕ್ಷಮ ಪ್ರಾಧಿಕಾರವು ಸುಪರ್ದಿಗೆ ಪಡೆದುಕೊಂಡಿದೆ.

ಈ ಪೈಕಿ ಐಷಾರಾಮಿ ಪ್ಲ್ರಾಟ್‌, ನಿವೇಶನ, ಕಟ್ಟಡ ಸೇರಿ 200 ಕೋಟಿ ರೂ. ಮೌಲ್ಯದ ಒಂದೇ ಸ್ಥಿರಾಸ್ತಿಗಳನ್ನು ಇಡಿ ಹಾಗೂ ಸಕ್ಷಮ ಪ್ರಾಧಿಕಾರ ಎರಡೂ ಸಂಸ್ಥೆಗಳು ಜಪ್ತಿ ಮಾಡಿಕೊಂಡಿವೆ. ಇವುಗ ಳನ್ನು ಹರಾಜಿಗೆ ಹಾಕಿ ಅದರಿಂದ ಬರುವ ದುಡ್ಡನ್ನು ಸಂತ್ರಸ್ತರಿಗೆ ಪರಿಹಾರ ರೂಪದಲ್ಲಿ ನೀಡಲು ಸಕ್ಷಮ ಪ್ರಾಧಿಕಾರವು ಸಿದ್ಧವಿದೆ. ಆದರೆ, ಐಎಂಎ ಪ್ರಕರಣದ ತನಿಖೆ ನಡೆಸಿ ನ್ಯಾಯಾ ಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವವರೆಗೂ 200 ಕೋಟಿ ರೂ. ಸ್ಥಿರಾಸ್ಥಿ ಯನ್ನು ಪ್ರಾಧಿಕಾರದ ಸುಪರ್ದಿಗೆ ನೀಡುವುದಿಲ್ಲ ಎಂದು ಇಡಿ ಪಟ್ಟು ಹಿಡಿದು ಕುಳಿತಿದೆ.

ಇಡಿ ತನಿಖೆ ಮುಕ್ತಾಯಗೊಳಿಸಿ ಚಾರ್ಜ್‌ ಶೀಟ್‌ ಸಲ್ಲಿಕೆಗೆ ಇನ್ನೂ ಹಲವು ತಿಂಗಳುಗಳೇ ಹಿಡಿಯಲಿದೆ. ಇದರಿಂದ ಸಕ್ಷಮ ಪ್ರಾಧಿಕಾರಕ್ಕೆ 200 ಕೋಟಿ ರೂ.ಮೌಲ್ಯದ ಆಸ್ತಿ ಹಂಚಿಕೆ ಸವಾಲಾಗಿದೆ.

ಸಂತ್ರಸ್ತರಿಗೆ 90 ಕೋಟಿ ರೂ. ಹಂಚಿಕೆ: ಐಎಂಎಯಿಂದ ಜಪ್ತಿಪಡಿಸಿಕೊಂಡ ನಗದು, ಚಿನ್ನಾಭರಣ, ವಾಹನ, ಕಂಪ್ಯೂಟರ್‌, ಪೀಠೊಪಕ ರಣಗಳ ಹರಾಜಿನಿಂದ ಬಂದಿರುವ 90 ಕೋಟಿ ರೂ. ಅನ್ನು ಸಕ್ಷಮ ಪ್ರಾಧಿಕಾರ ಸಂತ್ರಸ್ತರಿಗೆ ಹಂಚಿದೆ. 50 ಸಾವಿರ ರೂ.ಗಿಂತ ಕಡಿಮೆ ಹೂಡಿರುವ 6 ಸಾವಿರ ಸಂತ್ರಸ್ತರಿಗೆ ಮೊದಲ ಹಂತದಲ್ಲಿ 19 ಕೋಟಿ ರೂ. ಪರಿಹಾರ ನೀಡಲಾಗಿತ್ತು. ಎರಡನೇ ಹಂತದಲ್ಲಿ 66 ಕೋಟಿ ರೂ. ಅನ್ನು 53,800 ಹೂಡಿಕೆದಾರರಿಗೆ ಸಮಾನಾಗಿ ಹಂಚಲಾಗಿದೆ. ಇನ್ನು ಬ್ಯಾಂಕ್‌ ಖಾತೆ ದಾಖಲೆಗಳಲ್ಲಿ ಲೋಪವಿದ್ದ 1,500 ಮಂದಿಗೆ 3 ಕೊಟಿ ರೂ. ಶೀಘ್ರದಲ್ಲೇ ಹಂಚಿಕೆಯಾಗಲಿದೆ ಎಂದು ಐಎಂಎ ಸಕ್ಷಮ ಪ್ರಾಧಿಕಾರದ ವಿಶೇಷ ಅಧಿಕಾರಿ ಆದಿತ್ಯ ಆಮ್ಲನ್‌ ಬಿಸ್ವಾಸ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಉ.ಪ್ರದೇಶ, ದೆಹಲಿಯಲ್ಲಿ ಕಟ್ಟಡ ಜಪ್ತಿ ಬಾಕಿ:

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಐಎಂಎಗೆ ಸೇರಿದ ಒಂದೂವರೆ ಕೋಟಿ ರೂ. ಮೌಲ್ಯದ 8 ಎಕರೆ ಜಾಗವನ್ನು ಸಕ್ಷಮ ಪ್ರಾಧಿಕಾರವು ಇತ್ತೀಚೆಗೆ ಪತ್ತೆ ಹಚ್ಚಿದೆ. ಇದನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ದೆಹಲಿಯಲ್ಲಿ 26 ಲಕ್ಷ ರೂ. ಮೌಲ್ಯದ 2 ಕಟ್ಟಡ ವಶಪಡಿಸಿಕೊಳ್ಳಬೇಕಿದೆ. ಇದುವರೆಗೆ ಜಪ್ತಿಪಡಿಸಿಕೊಂಡಿರುವ ಐಎಂಎಗೆ ಸೇರಿದ 300 ಕೋಟಿ ರೂ. ಹೊರತುಪಡಿಸಿ ಉಳಿದ ದುಡ್ಡನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದೇ ನಿಗೂಢವಾಗಿದೆ.

ಇಬ್ಬರು ಐಪಿಎಸ್‌ ಅಧಿಕಾರಿಗಳು ಪಾರು:

ಹಿರಿಯ ಐಪಿಎಸ್‌ ಅಧಿಕಾರಿಗಳಾದ ಅಜಯ್‌ ಹಿಲೋರಿ ಹಾಗೂ ಹೇಮಂತ್‌ ನಿಂಬಾಳ್ಕರ್‌ ಐಎಂಎ ಹಗರಣದಲ್ಲಿ ಶಾಮೀಲಾಗಿರು ವುದಾಗಿ ಸಿಬಿಐ ತನಿಖಾ ವರದಿಯಲ್ಲಿ ಆರೋಪಿಸಿತ್ತು. ಇದರ ಬೆನ್ನಲ್ಲೇ ಭ್ರಷ್ಟಾಚಾರ ಕಾಯ್ದೆ ಅಡಿಯಲ್ಲಿ ಇಬ್ಬರನ್ನೂ ಅಭಿಯೋಜನೆಗೆ ಒಳಪಡಿಸಲು ಕೇಂದ್ರ ಸರ್ಕಾರವು ಅಭಿಯೋಜನಾ ಮಂಜೂರಾತಿ ನೀಡಿತ್ತು. ಇದೀಗ ಇಲಾಖಾ ವಿಚಾರಣೆಯಲ್ಲಿ ಇಬ್ಬರು ಐಪಿಎಸ್‌ ಅಧಿಕಾರಿಗಳ ವಿರುದ್ಧದ ಆರೋಪ ಗಳು ಸಾಬೇತಾಗದ ಹಿನ್ನೆಲೆಯಲ್ಲಿ ವಿಚಾರಣೆ ಮುಕ್ತಾಯಗೊಳಿಸಲಾಗಿದೆ. ಸದ್ಯ ಇಬ್ಬರು ಅಧಿಕಾರಿಗಳು ಪ್ರಕರಣದಿಂದ ಪಾರಾಗಿದ್ದಾರೆ.

200 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಕ್ಷಮ ಪ್ರಾಧಿಕಾರದ ಸುಪರ್ದಿಗೆ ನೀಡುವಂತೆ ಇಡಿಗೆ ಮನವಿ ಮಾಡಿದ್ದೇವೆ. ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ನೀಡುವುದು ಸಕ್ಷಮ ಪ್ರಾಧಿಕಾರದ ಗುರಿಯಾಗಿದೆ.-ಆದಿತ್ಯ ಆಮ್ಲನ್‌ ಬಿಸ್ವಾಸ್‌, ಐಎಂಎ ಸಕ್ಷಮ ಪ್ರಾಧಿಕಾರದ ವಿಶೇಷ ಅಧಿಕಾರಿ. 

-ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next