Advertisement

ನಾನಿದ್ದೇನೆ ಮಾತಾಡಿ: ದಲಿತರಿಗೆ ಖರ್ಗೆ ಅಭಯ

03:45 AM Jan 22, 2017 | Team Udayavani |

ಕಲಬುರಗಿ: ಮೀಸಲಾತಿಯ ಹೆಸರಿನಲ್ಲಿ ಒಡೆದಾಳುವ ಮತ್ತು ಹಿಂದುಳಿದವರನ್ನು, ದಲಿತರನ್ನು ದಮನಿಸಲು
ಸಜ್ಜಾಗಿರುವ ಜಾತಿವಾದಿಗಳ ವಿರುದ್ಧ ದಲಿತರು ಧ್ವನಿ ಎತ್ತುವ ಸಮಯ ಬಂದಿದೆ. ನಿಮ್ಮ ಹಿಂದೆ ನಾನಿರುತ್ತೇನೆ,
ನಿರ್ಭಯವಾಗಿ ಧ್ವನಿ ಎತ್ತಿ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ದಲಿತ ಬುದ್ಧಿಜೀವಿಗಳು
ಹಾಗೂ ಚಿಂತಕರಿಗೆ ಅಭಯ ನೀಡಿದರು. ಗುಲಬರ್ಗಾ ವಿವಿಯಲ್ಲಿ ಶನಿವಾರ ಕನ್ನಡ ಅಧ್ಯಯನ ಸಂಸ್ಥೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕನ್ನಡ ದಲಿತ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಆರೆಸ್ಸೆಸ್‌ನ ಭಾಗವತ್‌ ಮತ್ತು ವೈದ್ಯ ಮೀಸಲಾತಿ ಕುರಿತು ಮಾತನಾಡುತ್ತಿದ್ದಾರೆ. ಬಾಬಾ ಸಾಹೇಬರು ಮೀಸಲಾತಿ ತೆಗೆಯುವ ಬಗ್ಗೆ ಹೇಳಿದ್ದರ ಕುರಿತು ಕಾಳಜಿ ವಹಿಸುವ ಸಂಘ ಪರಿವಾರಗಳು, ಬಾಬಾಸಾಹೇಬರು ಹೇಳಿರುವ ಅಸ್ಪೃಶ್ಯತೆ ನಿವಾರಣೆ, ಆರ್ಥಿಕ ಸಮಾನತೆ, ಶೈಕ್ಷಣಿಕ ಸಮಾನತೆ, ಜಮೀನು ಇಲ್ಲದವರಿಗೆ ಜಮೀನು ಕೊಡುವ ಬಗ್ಗೆ ಹೇಳುವುದಿಲ್ಲ. ಆದ್ದರಿಂದ ದಲಿತ ಬುದ್ಧಿಜೀವಿಗಳು, ದಲಿತ ಚಿಂತಕರು, ವಿಚಾರವಾದಿಗಳು ಪ್ರತ್ಯುತ್ತರ ನೀಡುವ ಕಾಲ ಬಂದಿದೆ. ನೀವೂ ಉತ್ತರ
ನೀಡಿ. ನಿಮ್ಮ ಹಿಂದೆ ನಾನಿದ್ದೇನೆ. ನೋಡೋಣ ಏನಾಗುತ್ತದೋ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next