Advertisement

ಅಕ್ರಮ ಸಂಬಂಧ: ಮಹಿಳೆ ಕೊಲೆ; ಆರೋಪಿಗಾಗಿ ಶೋಧ

02:28 PM Apr 06, 2023 | Team Udayavani |

ಆನೇಕಲ್‌: ವಿವಾಹಿತ ಮಹಿಳೆ ಹತ್ತು ವರ್ಷಗಳ ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ ವಾಗಿರುವ ಘಟನೆ ಆನೇಕಲ್‌ ತಾಲೂಕಿನ ಹೆಬ್ಬಗೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

Advertisement

ಮಂಜು(32) ಕೊಲೆಯಾದ ಗೃಹಿಣಿ, ಹೆಬ್ಬಗೋಡಿ ಸಮೀಪದ ಸಿಂಗೇನ ಅಗ್ರಹಾರದ ನಿರ್ಜನ ಪ್ರದೇಶದಲ್ಲಿ ಗೃಹಣಿಯ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣವನ್ನು ಹೆಬ್ಬಗೋಡಿ ಪೊಲೀಸರು ದಾಖಲಿಕೊಂಡಿದ್ದರು. ಕಳೆದ ತಿಂಗಳ 29ರಂದು ಕೊಲೆಯಾದ ಮಂಜು ಸಹೋದರಿ ಲಕ್ಷ್ಮೀ ಅಕ್ಕ ಕಾಣಿಯಾಗಿದ್ದಾರೆ ಎಂದು ಹೆಬ್ಬಗೋಡಿ ಠಾಣೆಗೆ ದೂರು ನೀಡಿದ್ದರು.

ಸುಟ್ಟು ಹಾಕಿರುವ ಶವ ಮಂಜು ಎಂದು ಖಚಿತ ಪಡಿಸಿಕೊಂಡ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಕೊಲೆಯಾದ ಮಂಜು ವಿವಾಹವಾಗಿದ್ದಳು, ಸಂಪಿಗೆ ನಗರದಲ್ಲಿನ ನಾರಾಯಣ ಎಂಬುವ ನೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಳು. ಈ ವಿಷಯ ಗಂಡನಿಗೆ ತಿಳಿದು ಗಲಾಟೆಯಾಗಿ ಗಂಡ ಮಂಜುವನ್ನು ಬಿಟ್ಟು ಹೋಗಿದ್ದಳು. ಮಂಜು ವಸತಿ ಸಂಕೀರ್ಣದಲ್ಲಿ ಕೆಲಸಕ್ಕೆ ಹೋಗ ಬಾರೆಂದು ಕಳೆದ ಒಂದೂವರೆ ವರ್ಷದಿಂದ ಹಾಗಾಗಿ ಗಲಾಟೆ ಮಾಡುತ್ತಿದ್ದ. ಇದು ಮಂಜು ಮನೆಯವರಿಗೂ ತಿಳಿದಿತ್ತು. ಇದೇ ಹಿನ್ನೆಲೆಯಲ್ಲಿ ಕೊಲೆಯಾಗಿರಬಹದು ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಸಾಕ್ಷ್ಯ ಕಲೆ ಹಾಕಿದ್ದಾರೆ. ಬೆಂ.ಗ್ರಾಮಾಂತರ ಜಿಲ್ಲಾ ಪೊಲೀಸ್‌ ಎಸ್ಪಿ ಪುರುಷೋತ್ತಮ್‌ ಭೇಟಿ ನೀಡಿ ಆರೋಪಿಯ ಬಂಧನಕ್ಕೆ ತಂಡ ರಚಿಸಿಲು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next