Advertisement

Karwar: ಅಕ್ರಮ ಮರಳು ಸಾಗಾಟ: ಎಸಿ‌ ದಾಳಿ – 30 ಟನ್ ಮರಳು, ಲಾರಿ ವಶ

06:45 PM Oct 15, 2023 | Team Udayavani |

ಕಾರವಾರ : ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 3 ಮರಳು ಅಡ್ಡೆಯ ಮೇಲೆ ತಡರಾತ್ರಿ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ.

Advertisement

ಕಾರವಾರ ತಾಲೂಕಿನ ಕೆರವಡಿ, ನಂದನಗದ್ದಾ ಉರ್ದು ಶಾಲೆ ಬಳಿ, ಹೊಟೆಗಾಳಿ ಬಳಿ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್, ತಹಸೀಲ್ದಾರ್ ಎನ್.ಎಫ್ ನರೋನಾ ಹಾಗೂ ಪೊಲೀಸ್ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದ್ದರು. ಈ ವೇಳೆ ಕಾಳಿ ನದಿಯಿಂದ ತೆಗೆಯಲಾಗಿದ್ದ ಸುಮಾರು 30 ಟನ್ ಮರಳು ಹಾಗೂ ಲಾರಿ ವಶಕ್ಕೆ ಪಡೆಯಲಾಗಿದೆ. ಲಾರಿಯನ್ನು ಮಲ್ಲಾಪುರ ಪೊಲೀಸರ ವಶಕ್ಕೆ ಹಾಗೂ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next