Advertisement

Illegal Sand ಸಾಗಾಟ; ನಾಲ್ವರ ವಿರುದ್ಧ ಪ್ರಕರಣ

12:50 AM Mar 23, 2024 | Team Udayavani |

ಬಂಟ್ವಾಳ: ನರಿಕೊಂಬು ಗ್ರಾಮದ ನೆಹರೂ ನಗರದಲ್ಲಿ ಮಾ. 21ರಂದು ಬೆಳಗ್ಗೆ ಬಂಟ್ವಾಳ ನಗರ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ 2 ಟಿಪ್ಪರ್‌ಗಳಲ್ಲಿ ಅಕ್ರಮ ಮರಳು ಸಾಗಾಟ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

ಒಂದು ಟಿಪ್ಪರ್‌ನ ಮಾಲಕ ಹಾಗೂ ಚಾಲಕ ಕನ್ಯಾನ ನಿವಾಸಿ ಅಬ್ದುಲ್‌ ರಹಿಮಾನ್‌, ಮರಳು ಕಳವಿಗೆ ಸಹಕರಿಸಿದ ಅಡ್ಯಾರ್‌ ನಿವಾಸಿ ಮಹಮ್ಮದ್‌ ಸಾದಿಕ್‌, ಮತ್ತೊಂದು ಟಿಪ್ಪರ್‌ ಚಾಲಕ ವಿಟ್ಲಮುಟ್ನೂರು ನಿವಾಸಿ ಗೌತಮ್‌ ಹಾಗೂ ಮಾಲಕ ವೀರಕಂಭ ನಿವಾಸಿ ಗುಡ್ಡಪ್ಪ ಗೌಡ ಪ್ರಕರಣದ ಆರೋಪಿಗಳಾಗಿದ್ದಾರೆ.

ನಗರ ಠಾಣಾ ಪಿಎಸ್‌ಐ ರಾಮಕೃಷ್ಣ ಅವರು ಸಿಬಂದಿಯೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ 2 ಟಿಪ್ಪರ್‌ಗಳಲ್ಲಿ ಅಕ್ರಮ ಮರಳುಗಾರಿಕೆ ಪತ್ತೆಯಾಗಿದೆ. ಈ ಕುರಿತು ಚಾಲಕರಲ್ಲಿ ವಿಚಾರಿಸಿದಾಗ ವಳಚ್ಚಿಲ್‌ ನೇತ್ರಾವತಿ ನದಿಯಿಂದ ಅನುಮತಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ. ಘಟನೆಯಲ್ಲಿ ಲಾರಿಗಳನ್ನು ಮರಳು ಸಹಿತ ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next