Advertisement

ಅನೈತಿಕ ಸಂಬಂಧ ; ಪತಿಯಿಂದಲೇ ಪತ್ನಿ, ಪ್ರಿಯಕರನ ಕೊಲೆ

07:19 PM Feb 02, 2021 | sudhir |

ಬಳ್ಳಾರಿ: ಅನೈತಿಕ ಸಂಬAಧ ಹಿನ್ನೆಲೆ ಪತಿಯೇ ಪತ್ನಿ ಮತ್ತು ಆಕೆಯ ಪ್ರಿಯಕರನ್ನು ಕತ್ತು ಹಿಚುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಂಡೂರು ತಾಲೂಕು ಇರಾಳ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

Advertisement

ಇರಾಳ ಗ್ರಾಮದ ಸಬಸಮ್ (27), ಫಯಾಜ್ (26) ಕೊಲೆಯಾದವರು. ತಬಸಮ್ ಪತಿ ಜಹಾಂಗೀರ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಮೂಲತಃ ಸಂಡೂರಿನವರಾದ ತಬಸಮ್‌ಳನ್ನು ಇರಾಳ ಗ್ರಾಮದ ಜಹಾಂಗೀರ್ ಎಂಬುವವನು ಮದುವೆಯಾಗಿದ್ದನು. ಆದರೆ, ಇವರ ಸಂಬಂಧಿಕರಾದ ಫಯಾಜ್ ಎಂಬ ಯುವಕನೊಂದಿಗೆ ತಬಸಮ್ ಅಕ್ರಮ ಸಂಬಂಧ ಹೊಂದಿದ್ದಾಳೆ. ವಿಷಯ ತಿಳಿದ ಪತಿ ಜಹಾಂಗೀರ್, ಪತ್ನಿ ತಬಸಮ್ ಮತ್ತು ಆಕೆಯ ಪ್ರಿಯಕರ ಫೈಯಾಜ್‌ನನ್ನು ಹಲ್ಲೆ ಮಾಡಿ ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ:ಚಿಕ್ಕಮಗಳೂರು ಕಾಫಿ ಮಂಡಳಿ ಕಚೇರಿ ಮುಚ್ಚಲು ಬೆಳೆಗಾರರ ವಿರೋಧ 

ಪತ್ನಿ ಮತ್ತು ಮಕ್ಕಳು ಕಳೆದ ಜನವರಿ 6 ರಂದು ಇರಾಳ್‌ನಲ್ಲಿನ ಮನೆ ಬಿಟ್ಟು ಹೋಗಿದ್ದಾರೆ ಎಂದು ಪತಿ ಜಹಾಂಗೀರ್ ಜನವರಿ 15 ರಂದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು. ಪತ್ನಿ ತಬಸಮ್ ಮತ್ತು ಮಕ್ಕಳನ್ನು ಹುಡುಕುತ್ತಿದ್ದ ಜಹಾಂಗೀರ್‌ಗೆ ಸಂಬಂಧದಲ್ಲಿ ಮಗನಾಗಬೇಕಿದ್ದ ಫೈಯಾಜ್ ಜತೆಯಲ್ಲಿ ಪತ್ನಿ ತಬಸಮ್ ಇರುವುದು ತಿಳಿದು ಇಬ್ಬರನ್ನೂ ಮಂಗಳವಾರ ಮಧ್ಯಾಹ್ನ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಸಿಪಿಐ ವಸಂತ ವಿ.ಅಸೂದೆ, ಪಿಎಸ್‌ಐ ತಿಮ್ಮಣ್ಣ ಚಾಮನೂರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next