Advertisement

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸತ್ಯೇಂದ್ರ ಜೈನ್‌ ಜೂ. 9ರ ವರೆಗೆ ಇ.ಡಿ. ವಶಕ್ಕೆ

01:10 AM Jun 01, 2022 | Team Udayavani |

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರ ಣದಲ್ಲಿ ಸೋಮವಾರ ಬಂಧಿತರಾಗಿರುವ ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಅವರನ್ನು ಜೂ. 9ರ ವರೆಗೆ ಜಾರಿ ನಿರ್ದೇಶನಾಲಯದ ಬಂಧನ ದಲ್ಲಿರಿಸಿ ನ್ಯಾಯಾಲಯ ಮಂಗಳವಾರ ಆದೇ ಶಿಸಿದೆ.

Advertisement

2015-16ನೇ ಸಾಲಿನ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಚಿವರನ್ನು ಬಂಧಿಸಿರುವ ಇ.ಡಿ. ಅಧಿಕಾರಿಗಳು, ಅವರನ್ನು 14 ದಿನಗಳ ಕಾಲ ತಮ್ಮ ವಶಕ್ಕೆ ಕೊಡುವಂತೆ ನ್ಯಾಯಾಲಯಕ್ಕೆ ಕೇಳಿದ್ದರು.

ಸಚಿವರು ನಿರಪರಾಧಿಯಾದರೂ ಅವರನ್ನು ಬಂಧಿಸಲಾಗಿದೆಯೆಂದು ಅವರ ಪರ ವಕೀಲರು ವಾದಿಸಿದ್ದರು. ವಾದ, ವಿವಾದ ಕೇಳಿಸಿ ಕೊಂಡಿರುವ ನ್ಯಾಯಾ ಲಯ ಜೂ.9ರ ವರೆಗೆ ಅವರನ್ನು ಇ.ಡಿ. ವಶಕ್ಕೆ ಕೊಟ್ಟಿದ್ದು, ಅಂದು ಅವರನ್ನು ನ್ಯಾಯಾಲಯ ದೆದುರು ಹಾಜರು ಪಡಿ ಸಲು ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next