ಹೊಸಪೇಟೆ: ಅಕ್ರಮ ಗಣಿಗಾರಿಕೆಯಿಂದ ಗಮನ ಸೆಳೆದ ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ ಅದಿರು ಸಾಗಾಟ ಶುರುವಾಗಿದ್ದು, ತಾಲೂಕಿನ ಕಲ್ಲಳ್ಳಿ ಚೆಕ್ ಪೋಸ್ಟ್ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕೋಟ್ಯಂತರ ರೂ. ಮೌಲ್ಯದ ಅದಿರು, 7 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಚೆಕ್ ಪೋಸ್ಟ್ನಲ್ಲಿ ಲಾರಿಯನ್ನು ವಶಪಡಿಸಿಕೊಂಡು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಹಿಂದೆಯೇ ಜಪು ಮಾಡಲಾಗಿದ್ದ ಅದಿರನ್ನು ಅಕ್ರಮವಾಗಿ ಮತ್ತೆ ಸಾಗಿಸುತ್ತಿರುವ ಶಂಕೆ ವ್ಯಕ್ತವಾಗಿದೆ.
ಇದಕ್ಕೆ ಸಂಬಂಧಿಸಿ ಗ್ರಾಮೀಣ ಠಾಣೆ ಪೊಲೀ ಸರು ಆಂಧ್ರ ಮೂಲದ ಲಾರಿ ಚಾಲಕರಾದ ವೀರ ಬಾಬು, ವೆಂಕಯ್ಯ ಹಾಗೂ ಆಂಜನೇಯ ಸೇರಿದಂತೆ ಒಟ್ಟು 7 ಜನ ರನ್ನು ಬಂಧಿಸಿ,ಒಟ್ಟು 1.52 ಕೋಟಿ ರೂ. ಮೌಲ್ಯದ ಅದಿ ರು ಹಾಗೂ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಮಧ್ಯೆ ಶಾಸಕರ ಸಂಬಂಧಿಯೊಬ್ಬರು ಅದಿರು ಸಾಗಿಸಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಅಲ್ಲದೆ ವಶಪಡಿಸಿಕೊಂಡ ಲಾರಿಗಳನ್ನು ಬಿಡುವಂತೆ ಪೊಲೀಸ್ ಇಲಾಖೆಯ ಮೇಲಧಿಕಾರಿಗಳ ಮೇಲೆ ಒತ್ತಡ ಹೇರಲಾಗಿತ್ತು ಎಂದು ಹೇಳಲಾಗಿದೆ. ಆದರೆ ವಿಷಯ ತಿಳಿದ ಕೂಡಲೇ ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲೆ
ಯಲ್ಲಿ ಗಣಿ ಅಕ್ರಮ ತಡೆಯುವ ಸಲುವಾಗಿ ಲೋಕಾಯುಕ್ತ ನ್ಯಾ| ಸಂತೋಷ ಹೆಗ್ಡೆ ಹಾಗೂ ಯು.ವಿ.ಸಿಂಗ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯಿಂದ 2010ರಲ್ಲೇ ಈ ಅದಿರನ್ನು ಜಪ್ತಿ ಮಾಡಲಾಗಿತ್ತು. ಆದರೆ ಶುಕ್ರವಾರ ರಾತ್ರಿ ಸುಮಾರು ಏಳು ಲಾರಿಗಳಲ್ಲಿ ಇದೇ ಅದಿರನ್ನು ಸಾಗಣೆ ಮಾಡುವುದು ಬೆಳಕಿಗೆ ಬಂದಿದೆ.