Advertisement

Kadaba ಜಾಗಕ್ಕೆ ಅಕ್ರಮ ಪ್ರವೇಶ, ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

11:38 PM May 27, 2024 | Team Udayavani |

ಕಡಬ: ಕೃಷಿ ಉದೇಶಕ್ಕಾಗಿ ತನ್ನ ಜಾಗದಲ್ಲಿ ಜೆಸಿಬಿಯಿಂದ ಸಮತಟ್ಟು ಗೊಳಿಸುವ ವೇಳೆ ನನ್ನ ಜಾಗಕ್ಕೆ ಕೆಲವರು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ನೂಜಿಬಾಳ್ತಿಲ ಗ್ರಾಮದ ಸಾಂತ್ಯಡ್ಕ ನಿವಾಸಿ ಸತ್ಯನಾರಾಯಣ ಎಸ್‌.ಎಚ್‌. ಅವರು ನೀಡಿದ ದೂರಿನಂತೆ ಐವರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸತ್ಯನಾರಾಯಣ ಎಸ್‌.ಎಚ್‌. ಅವರು ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಮಾಲೇಶ್ವರ ಕುಂಡೋಳಿ ಎಂಬಲ್ಲಿ ಜಮೀನು ಹೊಂದಿದ್ದು, ಅಲ್ಲಿ ಕೃಷಿ ಮಾಡುವ ಉದ್ದೇಶದಿಂದ ಜೆಸಿಬಿ ವಾಹನದಲ್ಲಿ ಕೆಲಸ ಮಾಡಿಸುತ್ತಿದ್ದಾಗ ಸ್ಥಳೀಯರಾದ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕ ನಿವಾಸಿಗಳಾದ ವಿಲ್ಪೆಡ್‌ ರೋಡ್ರಿಗಸ್‌, ಸೆ„ಮನ್‌ ಲೂಯಿಸ್‌ ರೋಡ್ರಿಗಸ್‌, ಹಳೆಸ್ಟೇಷನ್‌ನ ರಶೀದ್‌, ಧನಂಜಯ, ರವಿ ಮತ್ತು ಇತರರು, ಸತ್ಯನಾರಾಯಣ ಅವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ, ಹಿಟಾಚಿ ಆಪರೇಟರ್‌ ಪ್ರಕಾಶ್‌ ಎಂಬವರಿಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next