Advertisement

Kundapur: ಮನೆಗೆ ಅಕ್ರಮ ಪ್ರವೇಶ; ಜೀವ ಬೆದರಿಕೆ

01:19 AM Sep 15, 2023 | Team Udayavani |

ಕುಂದಾಪುರ: ಕೋಣಿ ಗ್ರಾಮದ ಎಚ್‌ಎಮ್‌ಟಿ ರಸ್ತೆಯಲ್ಲಿ ರುವ ಶ್ರೀಗಿರಿ ನಿವಾಸ ಎನ್ನುವಲ್ಲಿ ರೋಹಿಣಿ ಅವರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಹಾಕಿದ ಕುರಿತು ಪ್ರಕರಣ ದಾಖಲಾಗಿದೆ.

Advertisement

ರೋಹಿಣಿ ಅವರು ಸಹೋದರಿ ಸುಮಾ ಆರ್‌. ಶೇರೆಗಾರ್‌ ಬಳಿ ಮನೆ ಕಟ್ಟುವಾಗ ಪಡೆದ ಸಾಲದ ಹಣ 8 ಲಕ್ಷ ರೂ. ಗಳಿಗೆ ಹೆಚ್ಚಿನ ಬಡ್ಡಿ ಹಾಕಿ ನೀಡಬೇಕು. ಇಲ್ಲವಾದರೆ ಮನೆಯ ಅರ್ಧ ಜಾಗವನ್ನು ಬರೆದುಕೊಡಬೇಕು ಎಂದು ರಂಪಾಟ ಮಾಡಿದ್ದು, ಆಗ ನೆರೆಮನೆಯ ಅಭಿಷೇಕ್‌ ಜತೆಗೂಡಿ ಸುಮಾ ಹಲ್ಲೆ ಮಾಡಿದ್ದು, ರೋಹಿಣಿ ಅವರ ಪತಿ ರಮೇಶ್‌ ಬಿಡಿಸಿದ್ದರು.
ಆರೋಪಿಗಳು ಇಬ್ಬರಿಗೂ ಬೈದು 15 ದಿನದೊಳಗಾಗಿ 4 ಲಕ್ಷ ರೂ. ಹಣ ನೀಡಬೇಕು ಎಂದು ಜೀವ ಬೆದರಿಕೆ ಹಾಕಿದ್ದಾಗಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next