Advertisement

Police: ಅಕ್ರಮವಾಗಿ ಬಂಧನ: ತಪ್ಪೊಪ್ಪಿಕೊಂಡ ಖಾಕಿ?

12:34 PM Feb 14, 2024 | Team Udayavani |

ಬೆಂಗಳೂರು: ಜಾಮೀನು ರಹಿತ ಕೋರ್ಟ್‌ ವಾರೆಂಟ್‌ ಹಿನ್ನೆಲೆಯಲ್ಲಿ ಬಂಧಿ ಸಿದ ವ್ಯಕ್ತಿಯನ್ನು 9 ದಿನಗಳ ಕಾಲ ಠಾಣೆ ಯಲ್ಲಿ ಅಕ್ರಮ ಬಂಧನದಲ್ಲಿರಿಸಿ ಕರ್ತವ್ಯ ಲೋಪ ಎಸಗಿದ ಅಮೃತಹಳ್ಳಿ ಠಾಣಾಧಿ ಕಾರಿ ಸೇರಿ 6 ಜನ ಸಿಬ್ಬಂದಿ ಮಂಗಳವಾರ ರಾಜ್ಯ ಮಾನವ ಹಕ್ಕುಗಳ ಆಯೋಗದ ಎದುರು ವಿಚಾರಣೆಗೆ ಹಾಜರಾಗಿದ್ದರು.

Advertisement

ಠಾಣಾಧಿಕಾರಿ ಅಂಬರೀಶ್‌, ಪಿಎಸ್‌ಐ ಹಾಗೂ ಇತರೆ ಸಿಬ್ಬಂದಿ ಆಯೋಗದ ಡಿವೈಎಸ್ಪಿ ಸುಧೀರ್‌ ಎಂ.ಹೆಗ್ಡೆ ನೇತೃತ್ವದ ತಂಡದ ಎದುರು ವಿಚಾರಣೆ ಹಾಜರಾಗಿ ದ್ದರು. ವಿಚಾರಣೆಯಲ್ಲಿ ಕರ್ತವ್ಯಲೋಪ ಆಗಿದೆ ಎಂದು ಅಧಿಕಾರಿ-ಸಿಬ್ಬಂದಿ ತಪ್ಪೊ ಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾ ಗಿದೆ. ಆದರೆ, ಕೆಲ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡಿಲ್ಲ. ಹೀಗಾಗಿ ಮತ್ತೂಮ್ಮೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕೊಟ್ಟು ಕಳುಹಿಸಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ?: ಆರೋಪಿ ಯಾಸಿನ್‌ ಮಕುºಲ್‌ ಖಾನ್‌ 2022ರಲ್ಲಿ ಕಳ್ಳನತ ಪ್ರಕರ ಣದಲ್ಲಿ ಜೈಲು ಸೇರಿದ್ದ. ಕೆಲ ತಿಂಗಳ ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಆ ನಂತರ ಮುಂಬೈಗೆ ತೆರಳಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಇತ್ತ ಕೋರ್ಟ್‌, ಆರೋಪಿ ಪ್ರಕರಣದ ವಿಚಾರ ಣೆಗೆ ಗೈರಾಗಿರುವುದನ್ನು ಪ್ರಶ್ನಿಸಿ ಬಂಧನ ರಹಿತ ವಾರೆಂಟ್‌ ಹೊರಡಿಸಿತ್ತು. ಈ ಹಿನ್ನೆಲೆ ಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ ಅಮೃತಹಳ್ಳಿ ಠಾಣೆ ಪೊಲೀಸರು, ಮುಂಬೈಗೆ ತೆರಳಿ ಯಾಸಿನ್‌ನನ್ನು ಬಂಧಿಸಿ ದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗಾಗಲಿ ಹಾಗೂ ವಿಮಾನದಲ್ಲಿ ಆರೋಪಿಯೊಬ್ಬನನ್ನು ಕರೆದೊಯ್ಯುವಾಗ ಏರ್‌ಪೋರ್ಟ್‌ ಅಥಾರಿಟಿಗಾಗಲಿ ಮಾಹಿತಿ ನೀಡಿಲ್ಲ. ಮತ್ತೂಂದೆಡೆ ಮಹಾ ರಾಷ್ಟ್ರಕ್ಕೆ ತೆರಳುವ  ಮೊದಲು ಸಂಬಂಧಿಸಿದ ಡಿಸಿಪಿಗೆ ಮಾಹಿತಿ ನೀಡಬೇಕೆಂಬ ನಿಯಮವಿದೆ.

ಈ ನಿಯಮವನ್ನು ಠಾಣಾಧಿಕಾರಿ ಗಳು ಉಲ್ಲಂಘಿಸಿದ್ದಾರೆ. ಅಲ್ಲದೆ, ಫೆ.1 ರಂದು ಬೆಂಗಳೂರಿಗೆ ಕರೆತಂದರೂ ಕೋರ್ಟ್‌ಗೆ ಹಾಜರು ಪಡಿಸದೆ 9 ದಿನಗಳ ಕಾಲ ಠಾಣೆಯಲ್ಲೇ ಇರಿಸಿಕೊಂಡಿದ್ದರು. ಈ  ಬಗ್ಗೆ ಅಬ್ದುಲ್‌ ಮಜೀದ್‌ ಎಂಬ ವಕೀಲರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಫೆ.10ರಂದು ಆಯೋಗದ ಡಿವೈಎಸ್ಪಿ ಸುಧೀರ್‌ ಎಂ.ಹೆಗ್ಡೆ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next