Advertisement

ಅಕ್ರಮ ಅಡ್ಡೆಗೆ ದಾಳಿ: 40 ಲೋಡ್‌ ಮರಳು ವಶ

02:04 PM Apr 28, 2017 | Team Udayavani |

ಕಾರ್ಕಳ: ಅಕ್ರಮವಾಗಿ ದಾಸ್ತಾನು ಮಾಡಲ್ಪಟ್ಟ ಮರಳನ್ನು ಕಾರ್ಕಳ ತಹಶೀಲ್ದಾರ್‌ ಗುರುವಾರ ವಶಪಡಿಸಿಕೊಂಡಿದ್ದಾರೆ.

Advertisement

ಇಲ್ಲಿನ ಬೋಳ ಗ್ರಾಮದ ಬೋಪಾಡಿ ಹಾಗೂ ವಂಜಾರುಕಟ್ಟೆ  ಸಮೀಪ ಸುಮಾರು 40 ಲೋಡ್‌ ಅಕ್ರಮವಾಗಿ ದಾಸ್ತಾನಿರಿಸಿದ ಮರಳನ್ನು  ಕಾರ್ಕಳ ತಹಶೀಲ್ದಾರ್‌ ಟಿ.ಜಿ. ಗುರುಪ್ರಸಾದ್‌ ಹಾಗೂ ಲೋಕೋಪಯೋಗಿ  ಅಧಿಕಾರಿ ಗಳ ತಂಡ ದಾಳಿ ನಡೆಸಿ ವಶಪಡಿಸಿ ಕೊಂಡು  ಲೋಕೋಪ ಯೋಗಿ ಇಲಾಖೆಗೆ ಹಸ್ತಾಂತರಿಸಿ ಈ ಕುರಿತು ತನಿಖೆ ಮಾಡುವಂತೆ  ಸೂಚಿಸಿದರು. ಬೋಳ ಶಾಂಭವಿ ನದಿಯ ತಟದಲ್ಲಿ ಬರು ಬೋಪಾಡಿ ಮತ್ತು ಸೇತುವೆ ಬಳಿ ನಿರಂತರ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಮರಳನ್ನು  ಮಾರಾಟ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮರಳಿನ ಒಟ್ಟು ಮೌಲ್ಯ ಸುಮಾರು 4 ಲಕ್ಷ ರೂ. ಎನ್ನ ಲಾಗಿದೆ. ಅಕ್ರಮ ಮರಳು ಸಂಗ್ರಹಿಸಿಟ್ಟವರ  ಕುರಿತು ಮಾಹಿತಿ ತಿಳಿದು ಬಂದಿಲ್ಲವಾದರೂ ಜನ ಪ್ರತಿನಿಧಿಯೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸಿದ ಬಳಿಕ ನಿಜಾಂಶ ಬಯಲಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next