Advertisement

ಮಾನಸಿಕ ಕ್ಷೋಭೆ: ಆತ್ಮಹತ್ಯೆಗೆ ಶರಣಾದ ಐಐಟಿ ಪದವೀಧರ

11:58 AM Sep 26, 2017 | Team Udayavani |

ಗುರುಗ್ರಾಮ :  ಮಿಲೇನಿಯಂ ಸಿಟಿಯ ಗಾಲ್ಫ್ ಕೋರ್ಸ್‌ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ ಕಟ್ಟಡವೊಂದರ 23ನೇ ಮಹಡಿಯಿಂದ ಐಐಟಿ ಪದವೀಧರನೋರ್ವ ಕಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ಆತ್ಮಹತ್ಯೆ ಮಾಡಿಕೊಂಡಿರುವ ಐಐಟಿ ಪದವೀಧರನನ್ನು ಅಂಕಿತ್‌ ವಾಧ್ವಾ ಎಂದು ಗುರುತಿಸಲಾಗಿದೆ. ಈತ ಮೂಲತಃ ರಾಜಸ್ಥಾನದವ. ಎಂಬಿಎ ಪದವಿ ಶಿಕ್ಷಣಕ್ಕಾಗಿ ಗುರುಗ್ರಾಮಕ್ಕೆ ಬಂದಿದ್ದ ಈತ ಇಲ್ಲಿನ ಡಿಎಲ್‌ಎಫ್ ಅಪ್‌ ಸ್ಕೇಲ್‌ ಮ್ಯಾಗ್ನೊಲಿಯಾಸ್‌ ಅಪಾರ್ಟ್‌ಮೆಂಟ್‌ ಕಟ್ಟಡದ ಫ್ಲ್ಯಾಟ್‌ ಒಂದರಲ್ಲಿ ತನ್ನ ಚಿಕ್ಕಪ್ಪನ ಜತೆಗೆ ವಾಸಿಸಿಕೊಂಡಿದ್ದ.

ಸೋಮವಾರ ತಡರಾತ್ರಿ ಅಂಕಿತ್‌ ವಾಧ್ವಾ ಆತ್ಮಹತ್ಯೆ ಮಾಡಿಕೊಂಡನೆಂದು ಪೊಲೀಸರು ತಿಳಿಸಿದ್ದಾರೆ. 

ಆರಂಭಿಕ ತನಿಖೆಗಳಿಂದ ತಿಳಿದುಬಂದಿರುವ ಪ್ರಕಾರ ಅಂಕಿತ್‌ ತೀವ್ರವಾದ ಮಾನಸಿಕ ಕ್ಷೋಭೆಯಿಂದ ಬಳಲುತ್ತಿದ್ದ. ಆತ ತನ್ನ ಹಾಲಿ ಉದ್ಯೋಗದಿಂದಲೂ ಅಸಂತುಷ್ಟನಾಗಿದ್ದ. ಪರಿಣಾಮವಾಗಿ ಆತ ಆತ್ಮಹತ್ಯೆಗೆ ಶರಣಾದ ಎಂದು ತಿಳಿದು ಬಂದಿದೆ. 

ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಎಲ್ಲ ಕೋನಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next