Advertisement

28ಸ್ಥಾನ ಗೆಲ್ಲಬೇಕಾದರೆ 12 ಸ್ಥಾನ ಜೆಡಿಎಸ್ ಗೆ ಕೊಡಿ; “ಕೈ”ಗೆ ರೇವಣ್ಣ

09:02 AM Feb 20, 2019 | Team Udayavani |

ಬೆಂಗಳೂರು: ಮೈತ್ರಿಕೂಟದ ಸರ್ಕಾರದಲ್ಲಿ ಯಾರೂ ಭಿಕ್ಷುಕರಲ್ಲ, ಯಾರೂ ಸರ್ವಾಧಿಕಾರಿಯೂ ಅಲ್ಲ. ನಿನ್ನೆ ಮತ್ತು ಇಂದು ನಾನು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಅವರು ಸೌಜನ್ಯದಿಂದಲೇ ಮಾತನಾಡಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. ಏತನ್ಮಧ್ಯೆ ಸ್ಥಾನ ಹೊಂದಾಣಿಕೆ ಕುರಿತಂತೆ ಹಾಸನದಲ್ಲಿ ಎಚ್.ಡಿ.ರೇವಣ್ಣ ಕಾಂಗ್ರೆಸ್ ಗೆ ಖಡಕ್ ಸಂದೇಶ ರವಾನಿಸಿದ್ದಾರೆ.

Advertisement

ಅವರು ಬುಧವಾರ ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಅವರು ನಾವು ಬೆಗ್ಗರ್ಸ್(ಭಿಕ್ಷುಕರು) ಎಂದು ನೀಡಿದ್ದ ಹೇಳಿಕೆ ಕುರಿತು ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ, ನಾನು ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಸ್ಥಾನ ಹೊಂದಾಣಿಕೆ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ ಎಂದರು.

ಲೋಕಸಭೆ ಚುನಾವಣೆ ಸೀಟು ಹಂಚಿಕೆ ಕುರಿತ ಮಾತುಕತೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಡುವೆಯೇ ನಡೆಯಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ. ಅಲ್ಲದೇ 28 ಕ್ಷೇತ್ರಗಳ ಪೈಕಿ 4ರಿಂದ 5 ಕ್ಷೇತ್ರ ಮಾತ್ರ ಜೆಡಿಎಸ್ ಗೆ ಬಿಟ್ಟು ಕೊಡಲು ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ.

28 ಸ್ಥಾನ ಗೆಲ್ಲಬೇಕೆಂದರೆ, 12 ಸ್ಥಾನ ಬಿಟ್ಟು ಕೊಡಿ: ರೇವಣ್ಣ

ಕೋಮುವಾದಿ ಪಕ್ಷವನ್ನು ಲೋಕಸಭೆ ಚುನಾವಣೆಯಲ್ಲಿ ಎದುರಿಸಬೇಕೆಂದರೆ ಹೊಂದಾಣಿಕೆ ಅಗತ್ಯ ಎಂದು ಹೇಳಿರುವ ಜೆಡಿಎಸ್ ಮುಖಂಡ, ಸಚಿವ ಎಚ್.ಡಿ.ರೇವಣ್ಣ, ನಾವು ಕೇಳಿದಷ್ಟು ಸೀಟು ಕೊಡುವುದಾದರೆ ಕೊಡಲಿ, ಇಲ್ಲಾಂದ್ರೆ ನಾವು ಕೂಡಾ ತ್ರಿಕೋನ ಸ್ಪರ್ಧೆಗೆ ತಯಾರಾಗಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.

Advertisement

ಲೋಕಸಭೆಯ 28 ಸ್ಥಾನ ಗೆಲ್ಲಬೇಕೆಂದರೆ ಕಾಂಗ್ರೆಸ್ ಪಕ್ಷ ನಮಗೆ(ಜೆಡಿಎಸ್) 12 ಸ್ಥಾನಗಳನ್ನು ಬಿಟ್ಟು ಕೊಡಬೇಕು. ಲೋಕಸಭೆ ಸೀಟು ಹೊಂದಾಣಿಕೆ ಬಗ್ಗೆ ರಾಹುಲ್ ಗಾಂಧಿ ಮತ್ತು ದೇವೇಗೌಡರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next