Advertisement

ಕೋಚ್‌ ಆದರೆ ಸೆಹವಾಗ್‌ ಬಾಯಿಗೆ ಬೀಗ!

03:45 AM Jul 01, 2017 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಯ ಪೈಪೋಟಿಯಲ್ಲಿ ವೀರೇಂದ್ರ ಸೆಹವಾಗ್‌ ಹೆಸರು ಮುಂಚೂಣಿಯಲ್ಲಿದೆ. ಆದರೆ ಸೆಹವಾಗ್‌ಗೆ ಒಂದು ಬೇಸರದ ಸುದ್ದಿಯೂ ಇದೆ. ಒಂದೊಮ್ಮೆ ಅವರು ಕೋಚ್‌ ಆದರೆ ಸಾಮಾಜಿಕ ತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಂತಿಲ್ಲ, ಅವರಿಗೆ ಬಾಯು¾ಚ್ಚಿಕೊಂಡಿರಿ ಎಂದು ಹೇಳಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

Advertisement

ಸದಾ ಸಾಮಾಜಿಕ ತಾಣದಲ್ಲಿ ಒಂದಲ್ಲ ಒಂದು ಜನಪ್ರಿಯ ಹೇಳಿಕೆ ನೀಡುವ ಸೆಹವಾಗ್‌ಗೆ ಇದು ನುಂಗಲಾರದ ತುತ್ತಾಗುವುದರಲ್ಲಿ ಸಂಶಯವೇ ಇಲ್ಲ. ಜತೆಗೆ ಬಿಸಿಸಿಐ ಮತ್ತು ಸೆಹವಾಗ್‌ ಕಂದಕ ನಿಮಾರ್ಣವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಮುಖ್ಯ ಕೋಚ್‌ ಸ್ಥಾನಕ್ಕೆ ಅನಿಲ್‌ ಕುಂಬ್ಳೆ ರಾಜೀನಾಮೆ ನೀಡಿದ ಮೇಲೆ ಕೋಚ್‌ ಸ್ಥಾನಕ್ಕೆ ಸೆಹವಾಗ್‌ ಮತ್ತು ರವಿಶಾಸಿŒ ನಡುವೆ ತೀವ್ರ ಸ್ಪರ್ಧೆ ಏರ್ಪಟಿಟದೆ. ಸಲಹಾ ಸಮಿತಿಯಲ್ಲಿರುವ ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ ಮತ್ತು ವಿ.ವಿ.ಎಸ್‌. ಲಕ್ಷ್ಮಣ್‌ ಅವರಿಗೆ ಸೆಹವಾಗ್‌ ಆತ್ಮೀಯರಾಗಿದ್ದಾರೆ. ಹೀಗಾಗಿ ಕೋಚ್‌ ಆಗಿ ಸೆಹವಾಗ್‌ ಆಯ್ಕೆ ಆಗುವ ಸಾಧ್ಯತೆ ಹೆಚ್ಚಿನ ಪ್ರಮಾಣದಲ್ಲಿದೆ. ಕೋಚ್‌ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಜು. 9 ಕೊನೆಯ ದಿನವಾಗಿದೆ. ಈಗಾಗಲೇ ಕರ್ನಾಟಕದ ದೊಡ್ಡ ಗಣೇಶ್‌, ಲಾಲ್‌ಚಂದ್‌ ರಜಪೂತ್‌, ಟಾಮ್‌ ಮೂಡಿ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next