Advertisement

“ಕಮಿಷನ್‌’ದಾಖಲೆ ಇದ್ದರೆ ಸರ್ಕಾರ ಬರ್ಖಾಸ್ತುಗೊಳಿಸಿ: ಶರಣಪ್ರಕಾಶ

06:10 AM Feb 11, 2018 | Team Udayavani |

ಕಲಬುರಗಿ: ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ದೇಶದ ಒಂದು ರಾಜ್ಯ ಸರ್ಕಾರ ಶೇ.10 ಕಮಿಷನ್‌ ಮೇಲೆ ನಡೆಯುತ್ತಿದೆ ಎಂದು ಆರೋಪ ಮಾಡುವ ಮೂಲಕ ಪ್ರಧಾನಿ ಮೋದಿ ತಮ್ಮ ಹುದ್ದೆಯ ಘನತೆ ಕುಂದಿಸಿದ್ದಾರೆ. ಇದರೊಂದಿಗೆ ಪ್ರಜಾಪ್ರಭುತ್ವ ಅಸ್ಥಿರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ದೂರಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜಕ್ಕೂ ಅಂತಹ ಸಾಕ್ಷéಗಳು ಇದ್ದರೆ ತೋರಿಸಿ ಅಥವಾ ಅವುಗಳನ್ನು ಇಟ್ಟುಕೊಂಡು ಸರ್ಕಾರವನ್ನು ಬರ್ಖಾಸ್ತು ಮಾಡುವ ಅಧಿಕಾರವೂ ನಿಮಗಿದೆ. ಅದನ್ನು ಬಿಟ್ಟು ರಾಜಕೀಯಕ್ಕಾಗಿ ಮತ ಗಿಟ್ಟಿಸಿಕೊಳ್ಳಲು ದೊಡ್ಡ ಹುದ್ದೆಯಲ್ಲಿದ್ದು ಇಷ್ಟು ಕೀಳಾಗಿ ಮಾತನಾಡಿ ಪ್ರಜಾಪ್ರಭುತ್ವವನ್ನು ನಗೆಪಾಟಲಿಗೆ ತಳ್ಳುವ ಪ್ರಯತ್ನ ಸಲ್ಲ. ಗುಜರಾತಿನಲ್ಲಿ ನಿಮ್ಮ ಅಭ್ಯುದ್ಯಯ, ನರಮೇಧ ಹಾಗೂ ಉದ್ಯಮಿಗಳಿಗೆ ಹಾಸಿರುವ ರತ್ನಗಂಬಳಿಯನ್ನು ದೇಶದ ಜನ ನೋಡಿದ್ದಾರೆ. ಅದೂ ಅಲ್ಲದೆ, ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರು ಭಕ್ಷಿಸು ಕೇಸಿನಲ್ಲಿ ಮತ್ತು ಮೂರು ಮಂತ್ರಿಗಳು ಜೇಲಿಗೆ ಹೋದದ್ದು, ಎಲ್ಲವನ್ನು ನೋಡಿದ್ದಾರೆ. ಅವರನ್ನೆಲ್ಲ ಪಕ್ಕದಲ್ಲಿ ಕೂಡಿಸಿಕೊಂಡು ರಾಜ್ಯದಲ್ಲಿ ಮುಖ್ಯಮಂತ್ರಿ ಭ್ರಷ್ಟ ಸರ್ಕಾರ ನಡೆಸುತ್ತಿದ್ದಾರೆ ಎಂದು ಹೇಳುವ ಪ್ರಧಾನಿ ಅವರ ನೈತಿಕತೆಯನ್ನು ನಮ್ಮ ಜನರು ನೋಡಿದ್ದಾರೆ. ಅದೆಲ್ಲದಕ್ಕೂ ಉತ್ತರ ನೀಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next