Advertisement
ತಾಲೂಕಿನ ಸಂತೆಕಸಲಗೆರೆ ಶ್ರೀ ಭೂಮಿ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಕೊತ್ತತ್ತಿ ಹೋಬಳಿ ಜನಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ ಜನಜಾಗೃತಿ ಸಮಾವೇಶದಲ್ಲಿ ಮುಖಂಡರ ನಿರ್ಣಯಕ್ಕೆ ಜನರು ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
Related Articles
Advertisement
ತಗ್ಗಹಳ್ಳಿ ಕೃಷ್ಣ ಮಾತನಾಡಿ, ಹಣ ಇಲ್ಲದೆ ಚುನಾವಣೆ ಕಷ್ಟ ಎಂಬುದು ಸುಳ್ಳು. ಒಂದು ಎಕರೆ ಜಮೀನಿಲ್ಲದ ಮೋದಿಯವರು ದೇಶದ ಪ್ರಧಾನಿಯಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಕ್ವಾಟ್ರಾ, ಬಾಡು, 2 ಸಾವಿರ ರೂ. ಮಾರಾಟ ಮಾಡಿಕೊಳ್ಳದೆ, ಸ್ವಾಭಿಮಾನದಿಂದ ರಾಜಕೀಯ ಮಾಡೋಣ ಎಂದರು.
ಇಂಡುವಾಳು ಸಚ್ಚಿದಾನಂದ ಮಾತನಾಡಿ, ಶಾಸಕ ರಮೇಶ್ ಬಂಡಿಸಿದ್ದೇಗೌಡರು ತಾವು ಅಂಬರೀಶ್ ವಿರುದ್ಧ ಗೆದ್ದಿರುವುದೇ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅಂಬರೀಶ್ ಯಾವತ್ತಿಗೂ ರಾಜ್ಯ ನಾಯಕರೇ. ಲಕ್ಷಾಂತರ ಮತಗಳ ಅಂತರದಲ್ಲಿ ಗೆದ್ದು ಲೋಕಸಭೆ ಪ್ರವೇಶಿಸಿರುವವರ ಪೈಕಿ ಅವರೂ ಒಬ್ಬರು. 7 ಬಾರಿ ಕ್ಷೇತ್ರ ಪ್ರತಿನಿಧಿಸಿರುವ ಅವರ ಕುಟುಂಬದ ಸಾಧನೆಯನ್ನು ಹೇಳಲಿ ಎಂದು ಸವಾಲೆಸೆದರು.
ಸಿದ್ದರಾಮೇಗೌಡ ಮಾತನಾಡಿ, ಕೊತ್ತತ್ತಿ ಹೋಬಳಿಯ ಯಾರಾದರೂ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಿಂದ ಟಿಕೆಟ್ ತಂದಲ್ಲಿ ಅವರ ಪರ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುತ್ತೇವೆ. ಇದಕ್ಕೆ ಹೋಬಳಿಯ ಎಲ್ಲ ಮತದಾರರು ಸಹಕರಿಸಬೇಕೆಂದು ಕೋರಿದರು.
ಸಮಾವೇಶದಲ್ಲಿ ಕೊತ್ತತ್ತಿ ಗ್ರಾಪಂ ಮಾಜಿ ಅಧ್ಯಕ್ಷೆ ಶಕುಂತಲಾ, ಜಿಪಂ ಸದಸ್ಯ ರಾಮಲಿಂಗಯ್ಯ, ಮುಖಂಡರಾದ ಸೋಮಶಂಕರೇಗೌಡ, ಮಂಜೇಗೌಡ, ಎಪಿಎಂಸಿ ನಿರ್ದೇಶಕಿ ಪಲ್ಲವಿ ಇತರರಿದ್ದರು.