ಹೊಸದಿಲ್ಲಿ: ಹಣಕಾಸು ಬಿಕ್ಕಟ್ಟಿಗೆ ಒಳಗಾಗಿರುವ ಖಾಸಗಿ ರಂಗದ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ಕೂಡಲೇ 750 ಕೋಟಿ ರೂ. ನೆರವು ನೀಡಬೇಕು ಎಂದು ಪಾಲುದಾರ ಸಂಸ್ಥೆ ಎತಿಹಾದ್ ಸಂಸ್ಥೆಗೆ ಮನವಿ ಮಾಡಿದೆ. ನೆರವು ಸಿಗದೇ ಇದ್ದರೆ ಸಂಸ್ಥೆಯ ಮತ್ತಷ್ಟು ವಿಮಾನಗಳು ಹಾರಾಟ ನಡೆಸುವುದನ್ನು ರದ್ದು ಮಾಡಬೇಕಾದೀತು ಎಂದು ಸಂಸ್ಥೆಯ ಅಧ್ಯಕ್ಷ ನರೇಶ್ ಗೋಯಲ್ ಸೋಮವಾರ ಹೇಳಿದ್ದಾರೆ. ಈ ಬಗ್ಗೆ ಎತಿಹಾದ್ ಸಿಇಒ ಟೋನಿ ಡೊಗ್ಲಾಸ್ಗೆ ಬರೆದಿರುವ ಪತ್ರದಲ್ಲಿ ಪಸ್ತಾಪ ಮಾಡಿದ್ದಾರೆ. ನಾಗರಿಕ ವಿಮಾನಯಾನ ಖಾತೆ ಸಚಿವಾಲಯ ಷೇರುಗಳನ್ನು ಅಡವಿಟ್ಟು ಮಧ್ಯಂತರ ಸಾಲ ಪಡೆಯುವ ಪ್ರಸ್ತಾಪಕ್ಕೂ ಅನುಮೋದನೆ ನೀಡಿದೆ ಎಂಬ ಅಂಶವನ್ನೂ ಪ್ರಸ್ತಾಪಿಸಿದ್ದಾರೆ. ಜೆಟ್ಗೆ ನೆರವು ನೀಡುವ ಬಗ್ಗೆ ಶೀಘ್ರವೇ ಎತಿಹಾದ್ ಆಡಳಿತ ಮಂಡಳಿ ನಿರ್ಣಯ ಕೈಗೊಳ್ಳಲಿದೆ. ಮತ್ತೂಂದು ಬೆಳವಣಿಗೆಯಲ್ಲಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಂಸ್ಥೆಗೆ 2,050 ಕೋಟಿ ರೂ. ಸಾಲ ನೀಡಲಿದೆ ಎಂಬ ವರದಿಗಳನ್ನು ಜೆಟ್ ಏರ್ವೇಸ್ ಅಲ್ಲಗಳೆದಿದೆ.