Advertisement

ತಪಾಸಣೆ ವೇಳೆ ಅವಘಡ: ತಂತ್ರಜ್ಞ ಸಾವು

12:53 AM Jul 11, 2019 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದ ಕೋಲ್ಕತ್ತಾದ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ ಜೆಟ್‌ ಸಂಸ್ಥೆಯ ವಿಮಾನವೊಂದರ ತಪಾಸಣೆ ನಡೆಸುತ್ತಿದ್ದ ಏರ್‌ಕ್ರಾಫ್ಟ್ ಮೇಂಟೆನನ್ಸ್‌ ಸಿಬಂದಿಯಾದ ರೋಹಿತ್‌ ಪಾಂಡೆ ಎಂಬ ತಂತಜ್ಞರೊಬ್ಬರು ತಾಂತ್ರಿಕ ಅವಘಡದಿಂದ ಸಾವನ್ನಪ್ಪಿದ್ದಾರೆ.

Advertisement

ನೆಲದ ಮೇಲೆ ನಿಂತು ವಿಮಾನದ ಕೆಳಭಾಗದಲ್ಲಿರುವ ಹೈಡ್ರಾಲಿಕ್‌ ಬಾಗಿಲುಗಳ ತಪಾಸಣೆ ನಡೆಸುತ್ತಿದ್ದಾಗ ಆ ಬಾಗಿಲುಗಳು “ಹೈಡ್ರಾಲಿಕ್‌ ಪ್ರಶರ್‌’ನಿಂದಾಗಿ ಹಠಾತ್ತಾಗಿ ಮುಚ್ಚಿಕೊಂಡ ಪರಿಣಾಮ, ರೋಹಿತ್‌ ಅವರ ಕುತ್ತಿಗೆಯು ಬಾಗಿಲುಗಳ ನಡುವೆ ಸಿಲುಕಿಕೊಂಡಿತು. ಅವರನ್ನು ರಕ್ಷಿಸಲೆಂದು ಬಾಗಿಲುಗಳನ್ನು ಒಡೆಯಲಾಯಿತಾದರೂ, ಅಷ್ಟ ರಲ್ಲಿ ಅವರು ಅಸುನೀಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ತಾಂತ್ರಿಕ ಸಮಸ್ಯೆ ಕಾರಣವೇ ಅಥವಾ ಯಾರದ್ದಾದರೂ ನಿರ್ಲಕ್ಷ್ಯ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next