Advertisement

ಪಾಕ್‌ ನೊಂದಿಗೆ ಮಾತುಕತೆ ಇನ್ನೇನಿದ್ದರೂ POK ವಿಷಯದಲ್ಲಿ ಮಾತ್ರ!

10:58 AM Aug 19, 2019 | Hari Prasad |

ಚಂಡೀಗಢ: ಅಣ್ವಸ್ತ್ರ ಮೊದಲು ಬಳಸುವುದಿಲ್ಲ ಎಂಬ ಮಾತು ಏನಿದ್ದರೂ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಎಂದು ಹೇಳಿ ಪಾಕಿಸ್ಥಾನ ಬೆವರುವಂತೆ ಮಾಡಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ ಇದೀಗ ಪಾಕ್‌ ಗೆ ಇನ್ನೊಂದು ಶಾಕ್ ಕೊಟ್ಟಿದ್ದಾರೆ.

Advertisement

ಪಾಕ್‌ ನೊಂದಿಗೆ ನಮ್ಮ ಮಾತುಕತೆ ಇನ್ನು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಎಂದು ಅವರು ಹೇಳಿದ್ದಾರೆ. ಬಿಜೆಪಿಯ ಜನ ಆಶೀರ್ವಾದ್ ಯಾತ್ರೆಯಲ್ಲಿ ಮಾತನಾಡುತ್ತಿದ್ದ ಅವರು, ನಮ್ಮ ನೆರೆದೇಶದವರು ಭಾರತ ತಪ್ಪು ಮಾಡಿದೆ ಎಂದು ಅಂತಾರಾಷ್ಟ್ರೀಯ ಸಮುದಾಯದ ಬಾಗಿಲು ಬಡಿಯುತ್ತಿದ್ದಾರೆ.

ಆ ದೇಶ ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ನಾವು ಮಾತನಾಡುತ್ತೇವೆ ಎಂದಿದ್ದಾರೆ. ಅಲ್ಲದೇ ಬಾಲಾಕೋಟ್‌ ಗಿಂತಲೂ ದೊಡ್ಡ ದಾಳಿ ನಡೆಸಲು ಭಾರತ ಯೋಜನೆ ರೂಪಿಸಿದೆ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಉದ್ಧರಿಸಿದ ಅವರು, ಹಾಗಿದ್ದರೆ, ನಾವು ಬಾಲಾಕೋಟ್ ದಾಳಿ ನಡೆಸಿದ್ದೇವೆ ಎಂಬುದನ್ನು ಒಪ್ಪಿಕೊಂಡಂತೆ ಅಲ್ಲವೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next