Advertisement

ಸಿದ್ದರಾಮಯ್ಯ ಕುಷ್ಟಗಿಯಲ್ಲಿ ಸ್ಪರ್ಧಿಸಿದರೆ ಗೆಲ್ಲೋದು ಕಷ್ಟ

10:06 PM Dec 13, 2022 | Team Udayavani |

ಕುಷ್ಟಗಿ: ಮಾಜಿ ಸಿಎಂ ಸಿದ್ದರಾಮಯ್ಯ ಕುಷ್ಟಗಿಯಿಂದ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ಸ್ಪರ್ಧಿಸಿದರೆ ಅವರಿಗೆ ಕಷ್ಟವಾಗಲಿದೆ ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಷ್ಟಗಿಯಲ್ಲಿ ಕುರುಬರು ಹೆಚ್ಚು, ಮುಸ್ಲಿಂ ಸಮುದಾಯ ಕಡಿಮೆ ಇದೆ. ಕೊಪ್ಪಳದಲ್ಲಿ ಕುರುಬರು, ಮುಸ್ಲಿಂ ಎರಡೂ ಸಮ ಸಂಖ್ಯೆಯಲ್ಲಿದ್ದಾರೆ.

ಸಿದ್ದರಾಮಯ್ಯ ಈ ಎರಡೂ ಸಮುದಾಯದವರ ಸಂಖ್ಯೆ ದೃಷ್ಟಿಯಲ್ಲಿಟ್ಟುಕೊಂಡರೆ ಉಳಿದವರು ಎಷ್ಟು ಜನರಿದ್ದಾರೆನ್ನುವುದು ಮುಖ್ಯವಾಗುತ್ತದೆ. ಕುಷ್ಟಗಿಯಲ್ಲಿ ಕುರುಬ, ಮುಸ್ಲಿಂ ಎರಡೂ ಸೇರಿದರೆ ಶೇ.25 ಆಗಬಹುದು. ಉಳಿದ ಶೇ.75 ಜನರು ಒಂದಾಗಿರಲು ಸಾಧ್ಯವಿಲ್ಲ ಎಂದು ಇಟ್ಟುಕೊಂಡರು ಸಹ ಶೇ.50ರಿಂದ 60ರಷ್ಟು ಜನ ಒನ್‌ಸೈಡ್‌ ಆದರೆ ವ್ಯತಿರಿಕ್ತ ಪರಿಣಾಮ ಆಗುತ್ತದೆ. ಈ ಎರಡೂ ಸಮುದಾಯದವರ ಜತೆಗೆ ಬೇರೆ ಸಮುದಾಯ ಕೈ ಜೋಡಿಸಿದರೆ ಅವರಿಗೆ ಕಷ್ಟವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next