Advertisement

ನಕ್ಸಲೀಯರ ಅಟ್ಟಹಾಸ : CRPF ಮಹಾನಿರ್ದೇಶಕರ ಹೇಳಿಕೆಗೆ ರಾಹುಲ್ ಗಾಂಧಿ ಕಿಡಿ

06:17 PM Apr 05, 2021 | Team Udayavani |

ನವದೆಹಲಿ : ಮಾವೋವಾದಿಗಳನ್ನು ಸದೆಬಡಿಯಲು ರೂಪಿಸಲಾದ ಯೋಜನೆಯ ರೂಪುರೇಷೆಯೇ ಸೂಕ್ತವಾಗಿಲ್ಲ ಹಾಗೂ ಈ ಕಾರ್ಯಾಚರಣೆ ಅಸಮರ್ಥವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

Advertisement

ಶನಿವಾರ ಛತ್ತೀಸಗಡದಲ್ಲಿ ನಡೆದ ನಕ್ಸಲೀಯರ ದಾಳಿಗೆ ಗುಪ್ತಚರ ವೈಫಲ್ಯ ಕಾರಣವಲ್ಲ ಎಂದು ಹಿರಿಯ ಅಧಿಕಾರಿಗಳು ನೀಡಿರುವ ಹೇಳಿಕೆ ಖಂಡಿಸಿರುವ ರಾಹುಲ್ ಗಾಂಧಿ, ಒಂದು ವೇಳೆ ಗುಪ್ತಚರ ವೈಫಲ್ಯವಾಗಿಲ್ಲವೆಂದರೆ ದುರ್ಘಟನೆಯಲ್ಲಿ ಸತ್ತವರ ಪ್ರಮಾಣ 1:1 ಅನುಪಾತ ಹೇಗಾಯಿತು? ಇದರ ಅರ್ಥ ಈ ಕಾರ್ಯಾಚರಣೆಯನ್ನು ಸರಿಯಾಗಿ ರೂಪಿಸಿಲ್ಲ ಎಂದೇ ಅಲ್ಲವೇ? ಇದು ಅಸಮರ್ಥ ಕಾರ್ಯಾಚರಣೆಯಲ್ಲದೇ ಮತ್ತೇನು” ಎಂದು ಪ್ರಶ್ನಿಸಿದ್ದಾರೆ.

ದುರ್ಘಟನೆ ಕುರಿತು ಮಾತನಾಡಿದ್ದ CRPF ಡಿಜಿ ಕುಲದೀಪ್ ಸಿಂಗ್, ಗುಪ್ತಚರ ವೈಫಲ್ಯವಾಗಿಲ್ಲ, 30 ಮಂದಿ ನಕ್ಸಲರ ಹತ್ಯೆ ಕಾರ್ಯಾಚರಣೆಯಲ್ಲಿ ಗುಪ್ತದಳದ ವೈಫಲ್ಯವಿಲ್ಲ. ಘಟನೆಯಲ್ಲಿ ಯೋಧರು ಹುತಾತ್ಮರಾದಷ್ಟೇ ಸಂಖ್ಯೆಯಲ್ಲಿ ಮಾವೋವಾದಿ ಉಗ್ರರೂ ಸತ್ತಿದ್ದಾರೆ ಎಂದು ಹೇಳಿದ್ದರು. ಕುಲದೀಪ್ ಸಿಂಗ್ ಅವರ ಹೇಳಿಕೆ ಪ್ರಕಟಗೊಂಡ ಪತ್ರಿಕೆಯ ತುಣುಕು ಟ್ಯಾಗ್ ಮಾಡಿ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಸುಖಾಸುಮ್ಮನೆ ಹುತಾತ್ಮರಾಗಲು ನಮ್ಮ ಯೋಧರು ಯುದ್ಧಭೂಮಿಯಲ್ಲಿ ಫಿರಂಗಿಗೆ ಬಳಸುವ ವಸ್ತುಗಳಲ್ಲ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಇನ್ನು ಶನಿವಾರ  ಛತ್ತೀಸಗಡದ ಬಿಜಾಪುರ ಹಾಗೂ ಸುಕ್ಮಾ ಪ್ರದೇಶದಲ್ಲಿ ಮಾವೋವಾದಿಗಳ ವಿರುದ್ಧ ನಡೆದ ಗುಂಡಿನ ಕಾಳಗದಲ್ಲಿ ಅರೆಸೇನಾ ಪಡೆಯ 22 ಯೋಧರು ಹುತಾತ್ಮರಾಗಿದ್ದರು. .

Advertisement

Udayavani is now on Telegram. Click here to join our channel and stay updated with the latest news.

Next