Advertisement

Dwarka; ಶ್ರೀ ಕೃಷ್ಣ ಅನುಗ್ರಹಿಸಿದರೆ ಲೋಕಸಭೆಗೆ ಸ್ಪರ್ಧಿಸುತ್ತೇನೆ: ನಟಿ ಕಂಗನಾ ರಣಾವತ್

05:42 PM Nov 03, 2023 | Team Udayavani |

ದ್ವಾರಕೆ(ಗುಜರಾತ್) : ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಶುಕ್ರವಾರ ಚುನಾವಣ ರಾಜಕೀಯಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದು, ಶ್ರೀಕೃಷ್ಣ ಅನುಗ್ರಹಿಸಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

Advertisement

ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂದು ಕೇಳಿದಾಗ,”ಶ್ರೀಕೃಷ್ಣ ಆಶೀರ್ವಾದ ಮಾಡಿದರೆ ನಾನು ಹೋರಾಡುತ್ತೇನೆ” ಎಂದರು.

“600 ವರ್ಷಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತಿದೆ” ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಶ್ಲಾಘಿಸಿ ”ಜಗತ್ತಿನಾದ್ಯಂತ ಸನಾತನ ಧರ್ಮದ ಧ್ವಜ ಹಾರಾಡಬೇಕು” ಎಂದರು.

”ಗಿರ್ ಸೋಮನಾಥ ದೇವಾಲಯದಲ್ಲಿಯೂ ಪ್ರಾರ್ಥನೆ ಸಲ್ಲಿಸಿದರು. ಸೋಮನಾಥ ಮತ್ತು ರಾಮಮಂದಿರ ಒಂದೇ ಇತಿಹಾಸವನ್ನು ಹೊಂದಿದೆ. ಅವುಗಳನ್ನು ಕೆಡವಿದಷ್ಟು ಬಾರಿ ನಾವು ನಿರ್ಮಿಸಿದ್ದೇವೆ” ಎಂದರು.

ಮುಳುಗಡೆಯಾಗಿರುವ ದ್ವಾರಕೆಯನ್ನು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದರು.

Advertisement

ಕಂಗನಾ ಅವರು ನಿರ್ಮಾಣ ಮಾಡಿ ನಿರ್ದೇಶಿಸಿರುವ ‘ಎಮರ್ಜೆನ್ಸಿ’ಚಿತ್ರ ಮತ್ತು ‘ತನು ವೆಡ್ಸ್ ಮನು ಪಾರ್ಟ್ 3’ ಚಿತ್ರದ ಕುರಿತೂ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next