Advertisement

Kejriwal ಸಂಸತ್‌ನಲ್ಲಿದ್ದರೆ ದಿಲ್ಲಿಗೆ ಖುಷಿ: ಚುನಾವಣ ಪ್ರಚಾರದಲ್ಲಿ ಆಪ್‌ ಘೋಷಣೆ

12:51 AM Mar 09, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಆಮ್‌ ಆದ್ಮಿ ಪಕ್ಷವು ಶುಕ್ರವಾರ ಭರ್ಜರಿ ಪ್ರಚಾರ ಆರಂಭಿಸಿದೆ. “ಸಂಸತ್‌ನಲ್ಲಿ ಕೇಜ್ರಿವಾಲ್‌ ಇದ್ದರೆ ದಿಲ್ಲಿ ಮತ್ತಷ್ಟು ಖುಷಿಯಾಗಿ ಇರಲಿ’ (ಸಂಸದ್‌ ಮೇನ್‌ ಬಿ ಕೇಜ್ರಿವಾಲ್‌, ತೋ ದಿಲ್ಲಿ ಹೋಗಿ ಔರ್‌ ಕುಶ್‌ಹಾಲ್‌) ಎಂಬ ಧ್ಯೇಯ ವಾಕ್ಯವನ್ನು ಪಕ್ಷ ಬಿಡುಗಡೆ ಮಾಡಿದೆ.

Advertisement

ದಿಲ್ಲಿಯ ಆಪ್‌ ಕಚೇರಿಯಲ್ಲಿ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌, ಪಂಜಾಬ್‌ ಸಿಎಂ ಭಗವಂತ್‌ ಸಿಂಗ್‌ ಮಾನ್‌ ಸೇರಿ ಪ್ರಮುಖ ನಾಯಕರು ಹಾಜರಿದ್ದರು. ಈ ವೇಳೆ ಮಾತನಾಡಿದ ಅರವಿಂದ ಕೇಜ್ರಿವಾಲ್‌ “ದಿಲ್ಲಿ ಜನತೆಯೇ ನನ್ನ ಕುಟುಂಬ. ಅವರ ಸೇವೆಗಾಗಿ ಎಲ್ಲ ಪ್ರಯತ್ನಗಳನ್ನೂ ನಾನು ಮಾಡುತ್ತೇನೆ’ ಎಂದರು. ಪಂಜಾಬ್‌ನಲ್ಲಿ ಆಪ್‌ ಎಲ್ಲ 13 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಸಿಎಂ ಮಾನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next