Advertisement

Tungabhadra factory ವಿಚಾರದಲ್ಲಿ ಪಾತ್ರವಿದ್ದರೆ ಚುನಾವಣೆಗೆ ಸ್ಪರ್ಧಿಸಲ್ಲ: ರಾಘವೇಂದ್ರ

11:43 AM Dec 25, 2023 | keerthan |

ಶಿವಮೊಗ್ಗ: ತುಂಗಭದ್ರಾ ಕಾರ್ಖಾನೆ ವಿಚಾರದಲ್ಲಿ ನನ್ನ ಪಾತ್ರವೇನಾದರೂ ಇದ್ದರೆ ನಾನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇದರಲ್ಲಿ ನನ್ನ ಹಾಗೂ ನನ್ನ ಕುಟುಂಬದ ಪಾತ್ರ ಏನೂ ಇಲ್ಲ. ಸುಖಾಸುಮ್ಮನೆ ನಮ್ಮ ಕುಟುಂಬದ ಹೆಸರು ಇದರಲ್ಲಿ ಥಳಕು ಹಾಕುವ ಪ್ರಯತ್ನ ನಡೆದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ಒಂದು ಗುಂಟೆ ಭೂಮಿ ಪಡೆಯುವ ಪ್ರಯತ್ನವೂ ನಾವು ಮಾಡಿಲ್ಲ. ಅಕಸ್ಮಾತ್ ನನ್ನ ಮನಸಲ್ಲಿ ಈ ಆಲೋಚನೆ ಬಂದಿದ್ದೆ ಆದರೆ ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಈ ರೀತಿಯಿದ್ದರೆ ಆ ದೇವರು ನೋಡಿಕೊಳ್ಳುತ್ತಾನೆ ಎಂದರು.

ರೈತರಿಗೆ ಅನ್ಯಾಯ ಮಾಡಿ ಡಬ್ಬಲ್ ಗೇಮ್ ರಾಜಕಾರಣ ಮಾಡುವ ಸಂಸ್ಕ್ರತಿ ನಮ್ಮ ಪಕ್ಷ ಹೇಳಿಕೊಟ್ಟಿಲ್ಲ. ನನ್ನ ಸುಮ್ಮನೆ ವಿರುದ್ಧ ಆರೋಪ ಮಾಡುತ್ತಿರುವವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ರಾಘವೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next