Advertisement

Congress ಅಧಿಕಾರಕ್ಕೆ ಬಂದರೆ ಅಗ್ನಿಪಥ ಯೋಜನೆ ರದ್ದು: ಕಾಂಗ್ರೆಸ್‌

12:31 AM Feb 27, 2024 | Team Udayavani |

ಹೊಸದಿಲ್ಲಿ: “ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಗ್ನಿಪಥ ಯೋಜನೆಯನ್ನು ರದ್ದು ಮಾಡಿ, ಹಳೆಯ ನೇಮಕ ಪದ್ಧತಿಯನ್ನು ಮರುಜಾರಿ ಮಾಡುತ್ತೇವೆ.’ಹೀಗೆಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಚಿನ್‌ ಪೈಲಟ್‌ ಸೋಮವಾರ ಘೋಷಿಸಿದ್ದಾರೆ. ಈ ಯೋಜನೆಯು ಕೇಂದ್ರ ಸರಕಾರಕ್ಕೆ ಸ್ವಲ್ಪ ಹಣ ಉಳಿಸುತ್ತದೆ ಎಂಬುದನ್ನು ಬಿಟ್ಟರೆ ಇದರಿಂದ ಯಾರಿಗೂ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದೂ ಹೇಳಿದ್ದಾರೆ.

Advertisement

ಇದೇ ವೇಳೆ, ಸಶಸ್ತ್ರ ಪಡೆಗಳಲ್ಲಿ ನಿಯಮಿತ ಉದ್ಯೋಗ ಪಡೆಯುವ ಆಕಾಂಕ್ಷೆ ಹೊಂದಿದ್ದ ದೇಶದ ಯುವ ಜನರಿಗೆಲ್ಲ “ಅಗ್ನಿಪಥ’ ಯೋಜನೆ ಯಿಂದ ಘೋರ ಅನ್ಯಾಯವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಅಲ್ಲದೇ, ಯುವಜನತೆಗೆ ಆಗುತ್ತಿರುವ ಅನ್ಯಾಯ ತಪ್ಪಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ನಿಯಮಿತ ನೇಮಕ ಪ್ರಕ್ರಿಯೆ ರದ್ದತಿಯಿಂದ ಸುಮಾರು 2 ಲಕ್ಷ ಯುವಜನರ ಬದುಕು ಅನಿಶ್ಚಿತ ವಾಗಿದೆ. ಯುವಜನತೆ ಆತ್ಮಹತ್ಯೆ, ಖನ್ನತೆಯ ಪರಿಸ್ಥಿತಿಗೆ ತಲುಪುತ್ತಿದೆ ಎಂದೂ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next