Advertisement

BY Election: ಬಿಜೆಪಿಯಿಂದ ಟಿಕೆಟ್‌ ಸಿಗದಿದ್ದರೆ ಸಿಪಿವೈ ಬಿಎಸ್‌ಪಿಯಿಂದ ಸ್ಪರ್ಧೆ?

10:09 PM Oct 20, 2024 | Team Udayavani |

ರಾಮನಗರ: ಜೆಡಿಎಸ್‌ ಟಿಕೆಟ್‌ ಬೇಡ ಎಂದು ನಿರಾಕರಿಸಿರುವ ಸಿ.ಪಿ.ಯೋಗೇಶ್ವರ್‌ ಬಿಜೆಪಿ ಚಿಹ್ನೆಯಿಂದ ಮಾತ್ರ ಸ್ಪರ್ಧಿಸುವುದಾಗಿ ಷರತ್ತು ಹಾಕಿದ್ದಾರೆ ಎನ್ನಲಾಗಿದೆ.

Advertisement

ಬಿಜೆಪಿಯಿಂದ ಟಿಕೆಟ್‌ ಸಿಗದೇ ಹೋದಲ್ಲಿ ಸೈನಿಕನ ಮುಂದಿನ ನಡೆ ಏನು ಎಂಬುದು ಎಲ್ಲರಲ್ಲಿ ಮೂಡಿರುವ ಕುತೂಹಲವಾಗಿದೆ. ಯೋಗೇಶ್ವರ್‌ ಆಪ್ತ ಮೂಲಗಳ ಪ್ರಕಾರ ಬಿಜೆಪಿ ಟಿಕೆಟ್‌ ಸಿಗದೇ ಹೋದಲ್ಲಿ ಪಕ್ಷೇತರವಾಗಿ ಇಲ್ಲವೇ ಬಿಎಸ್ಪಿ ಚಿಹ್ನೆಯಡಿ ಸ್ಪರ್ಧೆಮಾಡಲು ತಯಾರಿ ನಡೆಸಿದ್ದು, ಈಗಾಗಲೇ ಎರಡು ಸೆಟ್‌ ನಾಮಪತ್ರ ಸಿದ್ಧಪಡಿಸಿಕೊಂಡಿರುವ ಅವರು ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next